ಸಂಗ್ರಹ ಚಿತ್ರ 
ದೇಶ

ಮಗನ ಕಿರುಕುಳ ತಾಳಲಾರದೆ 'ದಯಾಮರಣ'ಕ್ಕೆ ಮೊರೆ ಇಟ್ಟ ವೃದ್ಧ ದಂಪತಿ

ಹೆತ್ತು, ಹೊತ್ತು ಸಾಕಿ ಸಲಹಿದ ಮಗನಿಂದಲೇ ಆಗುತ್ತಿದ್ದ ದೌರ್ಜನ್ಯ ಹಾಗೂ ಕಿರುಕುಳ ತಾಳಲಾರದೆ ವೃದ್ಧ ದಂಪತಿಗಳು ದಯಾಮರಣ ಕರುಣಿಸುವಂತೆ ಸರ್ಕಾರದ ಬಳಿ ಗೋಗರೆದಿರುವ ಘಟನೆಯೊಂದು ಚೆನ್ನೈನ ತಿರ್ಪುರ್ ನಲ್ಲಿ ನಡೆದಿದೆ. 

ತಿರ್ಪುರ್: ಹೆತ್ತು, ಹೊತ್ತು ಸಾಕಿದ ಮಗನಿಂದಲೇ ಆಗುತ್ತಿದ್ದ ದೌರ್ಜನ್ಯ ಹಾಗೂ ಕಿರುಕುಳ ತಾಳಲಾರದೆ ವೃದ್ಧ ದಂಪತಿಗಳು ದಯಾಮರಣ ಕರುಣಿಸುವಂತೆ ಸರ್ಕಾರದ ಬಳಿ ಗೋಗರೆದಿರುವ ಘಟನೆಯೊಂದು ಚೆನ್ನೈನ ತಿರ್ಪುರ್ ನಲ್ಲಿ ನಡೆದಿದೆ. 

ಚೆನ್ನಿಯಪ್ಪನ್ (85) ಹಾಗೂ ಕರುನಾಯ್'ಯಮ್ಮಳ್ (65) ಕುರುಕುಳ ಅನುಭವಿಸುತ್ತಿರುವ ವೃದ್ಧ ದಂಪತಿಗಳಾಗಿದ್ದು, ಕಿರುಕಳ ತಾಳಲಾರದೆ ದಯಾಮರಣ ಕರುಣಿಸುವಂತೆ ತಿರ್ಪುರ ಜಿಲ್ಲಾಧಿಕಾರಿಗಳಿ ಮನವಿ ಮಾಡಿಕೊಂಡಿದ್ದಾರೆ. 

ಮಗಳಿಗೆ ವಿವಾಹವಾಗಿದ್ದು, ಪತಿ ಮನೆಯಲ್ಲಿದ್ದಾಳೆ. ಇನ್ನು ಮಗ ಪಳನಿಸಾಮಿ ಜೊತೆಗೆ ನಾವು ವಾಸವಿದಿದ್ದವು. ಹಲವಾರು ಕಾರಣಗಳಿಂದ ಮಗ ಹಾಗೂ ಸೊಸೆ ನಮಗೆ ದೈಹಿಕ ಹಾಗೂ ಮಾನಸಿಕವಾಗಿ ನೋವು, ಹಿಂಸೆ ನೀಡುತ್ತಿದ್ದರು. ಕಿರುಕುಳ ತಾಳಲಾರದೆ, ಮನೆಯ ಮತ್ತೊಂದು ಭಾಗದಲ್ಲಿ ನಾವು ವಾಸವಿದ್ದೆವು. ಬಳಿಕ ಮಗನಿಗೆ ಒಂದು ಭಾಗದ ಮನೆಯನ್ನು ಆತನ ಹೆಸರಿಗೆ ಬರೆದುಕೊಟ್ಟಿದ್ದೆವು. ಆದರೂ, ನಮಗೆ ಕಿರುಕುಳ ನಿಲ್ಲಲಿಲ್ಲ. ಮನೆಯ ವಿದ್ಯುತ್, ನೀರು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದರು. ಬಳಿಕ ನಮ್ಮನ್ನೇ ನಿಂದಿಸುತ್ತಿದ್ದರು. ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದೆವು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. 

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಾಹನ ಸವಾರನೊಬ್ಬ ನನಗೆ ಗುದ್ದಿದ್ದ. ಈ ವೇಳೆ ಸ್ಥಳೀಯರು ನನ್ನ ಸಹಾಯಕ್ಕೆ ಧಾವಿಸಿದಾಗಲೂ ಯಾರೂ ಸಹಾಯ ಮಾಡದಂತೆ ನಿಂದಿಸಿದ್ದ. ಬಳಿಕ ನಾನೇ ನಿಧಾನಗತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿಲ್ಲ. ಕಾಲು ಮೂಳೆ ಮರಿದಿತ್ತು. ಎರಡು ತಿಂಗಳು ಚಿಕಿತ್ಸೆ ಪಡೆದುಕೊಂಡಿದ್ದೆ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡು ದಯಾಮರಣ ಕರುಣಿಸುವಂತೆ ಮೊರೆ ಇಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT