ಜೈಶಂಕರ್ 
ದೇಶ

ಎಲ್ಲರನ್ನು ಸ್ವಾಗತಿಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ: ಯುಎನ್‌ಎಚ್‌ಆರ್‌ಸಿಗೆ ಜೈಶಂಕರ್ ತಿರುಗೇಟು!

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ)ಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಜಗತ್ತಿನಲ್ಲಿ ಎಲ್ಲರನ್ನೂ ಸ್ವಾಗಿತಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ ಎಂದು ಸವಾಲು ಹಾಗಿದ್ದಾರೆ.

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ)ಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಜಗತ್ತಿನಲ್ಲಿ ಎಲ್ಲರನ್ನೂ ಸ್ವಾಗಿತಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ ಎಂದು ಸವಾಲು ಹಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ ಟೀಕಿಸಿರುವುದನ್ನು ಟೀಕಿಸಿದ ಜೈಶಂಕರ್ ಮಂಡಳಿಯ ನಿರ್ದೇಶಕರು ಈ ಹಿಂದೆ ಕೂಡ ತಪ್ಪು ಮಾಡಿದ್ದರು. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಮಾನವ ಹಕ್ಕುಗಳ ಮಂಡಳಿ ಹಿಂದಿನ ದಾಖಲೆಯನ್ನು ನೋಡಬೇಕು ಎಂದು ಹೇಳಿದ್ದಾರೆ. 

ಈ ಶಾಸನದ ಮೂಲಕ ನಾವು ಸ್ಥಿತಿಯಿಲ್ಲದವರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇವೆ. ಅದನ್ನು ಪ್ರಶಂಸಿಸಬೇಕು ಎಂದು ಇಟಿ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಸಿಎಎ ಕುರಿತಂತೆ ಕೇಳಿದಾಗ ಜೈಶಂಕರ್ ಉತ್ತರಿಸಿದರು. 

ನಾವು ಇದನ್ನು ದೊಡ್ಡ ಸಮಸ್ಯೆಯಾಗದಂತೆ ನಿಭಾಯಿಸಿದ್ದೇವೆ. ಪ್ರತಿಯೊಂದು ದೇಶದಲ್ಲೂ ಅಲ್ಲಿನ ಪೌರತ್ವವನ್ನು ನೋಡಿದಾಗ, ಒಂದು  ಮಾನದಂಡವನ್ನು ಹೊಂದಿರುತ್ತದೆ. ಆದರೆ ಪ್ರಪಂಚದ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ಹೇಳುವ ದೇಶವನ್ನು ನನಗೆ ತೋರಿಸಿ, ಯಾರು ಅದನ್ನು ಹೇಳುವುದಿಲ್ಲ ಎಂದು ಹೇಳಿದರು.

ಕಾಶ್ಮೀರ ವಿಷಯದಲ್ಲಿ ಯುಎನ್‌ಹೆಚ್‌ಆರ್‌ಸಿ ನಿರ್ದೇಶಕರು ಭಾರತದ ನಿರ್ಧಾರವನ್ನು ಒಪ್ಪುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಯುಎನ್‌ಹೆಚ್‌ಆರ್‌ಸಿ ನಿರ್ದೇಶಕರು ಈ ಮೊದಲು ತಪ್ಪು ಮಾಡಿದ್ದಾರೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT