ದೇಶ

ಕಾಶ್ಮೀರದಲಿ ಕೊರೋನಾ ತಡೆಗೆ ಫಾರೂಕ್ ಅಬ್ದುಲ್ಲಾರಿಂದ ಕೋಟಿ ರು. ಬಿಡುಗಡೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ಹಾವಳಿ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಇನ್ನೊಂದೆಡೆ ಶ್ರೀರಾಮನವಮಿಯನ್ನು ಭಕ್ತರು ಮನೆಗಳಲ್ಲೇ ಆಚರಿಸಿ ಎಂದು ಅಯೋಧ್ಯೆ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ಹಾವಳಿ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಇನ್ನೊಂದೆಡೆ ಶ್ರೀರಾಮನವಮಿಯನ್ನು ಭಕ್ತರು ಮನೆಗಳಲ್ಲೇ ಆಚರಿಸಿ ಎಂದು ಅಯೋಧ್ಯೆ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿಕೋವಿಡ್-19 ಹಾವಳಿ ಎದುರಿಸಲು ಪಕ್ಷದ ಅಧ್ಯಕ್ಷ ಮತ್ತು ಶ್ರೀನಗರ ಸಂಸದರು ಇಂದು ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು  ಪಕ್ಷದ  ವಕ್ತಾರರು ತಿಳಿಸಿದ್ದಾರೆ.

ಈ ಮೊತ್ತದಲ್ಲಿ ಶ್ರೀನಗರದ ಸ್ಕಿಮ್ಸ್ ಗೆ 50 ಲಕ್ಷ ರೂ., ಮಧ್ಯ ಕಾಶ್ಮೀರದ ಬುಡ್ಗಮ್ ಮತ್ತು ಗಂದರ್ಬಲ್ ಜಿಲ್ಲೆಗಳಿಗೆ ತಲಾ 25 ಲಕ್ಷ ರೂ. ವಿತರಿಸಲಾಗುವುದು. 

ಲೋಕಸಭೆಯಲ್ಲಿ ಅಬ್ದುಲ್ಲಾ ಪ್ರತಿನಿಧಿಸುವ ಶ್ರೀನಗರ ಸಂಸದೀಯ ಕ್ಷೇತ್ರವು ಶ್ರೀನಗರ, ಬುಡ್ಗಾಮ್ ಮತ್ತು ಗಂದರ್ಬಾಲ್ ಎಂಬ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ರಾಮನವಮಿ ಉತ್ಸವವನ್ನು ಮನೇಲಿ ಆಚರಿಸಿ-ಅಯೋಧ್ಯಾ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್

ಕೊರೋನಾವೈರಸ್ ಮಾರಕ ಹಾವಳಿಯ ಕಾರಣ ಈ ಸಾಲಿನ ಶ್ರೀರಾಮನವಮಿಯನ್ನು ಮನೆಗಳಲ್ಲೇ ಆಚರಿಸಬೇಕೆಂದು ಭಕ್ತರಿಗೆಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನರ್ತ್ಯ ಗೋಪಾಲ್ ದಾಸ್ ಮನವಿ ಮಾಡಿದ್ದಾ

“ಈ ಬಿಕ್ಕಟ್ಟು (ವೈರಸ್ ಹರಡುವುಕೆ) ಕೆಲವು ದಿನಗಳಲ್ಲಿ ಮುಗಿಯುತ್ತದೆ. ನಾವೆಲ್ಲರೂ ರಾಷ್ಟ್ರದ ಹಿತದೃಷ್ಟಿಯಿಂದ ಯೋಚಿಸಬೇಕು ಮತ್ತು ಕೊರೋನಾ ಹರಡುವುದನ್ನು ಪರೀಕ್ಷಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ” 

ಭಕ್ತರು ತಮ್ಮ ಮನೆಗಳಲ್ಲಿಭಗವಾನ್ ರಾಮನನ್ನು ಪೂಜಿಸಬೇಕು ಎಂದು ಟ್ರಸ್ಟ್‌ನ ದ್ವಿತೀಯ ಪ್ರಧಾನರಾಗಿರುವ ಮಹಂತ್ ಕಾಕಮ್ನಾಯನ್ ದಾಸ್ ಮತ್ತು ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ನೃತ್ಯ ಗೋಪಾಲ್ ಸಹ ವಿನಂತಿಸಿದರು./
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT