ಅಪೊಲೊ ಆಸ್ಪತ್ರೆ 
ದೇಶ

ಅಪೊಲೊ ಸಮೂಹದ ಆಸ್ಪತ್ರೆಗಳಲ್ಲಿ ಕೊರೋನಾವೈರಸ್ ಪರೀಕ್ಷೆ, ಸ್ಕ್ರೀನಿಂಗ್ ಆರಂಭ

ಅಪೊಲೊ ಸಮೂಹದ  ಆಸ್ಪತ್ರೆಗಳಲ್ಲಿ ಶುಕ್ರವಾರದಿಂದ ಕೊರೋನಾವೈರಸ್ ರೋಗಿಗಳ  ಪರೀಕ್ಷೆ ಹಾಗೂ ಸ್ಕ್ರೀನಿಂಗ್ ಆರಂಭವಾಗಲಿದೆ.

ಹೈದ್ರಾಬಾದ್: ಅಪೊಲೊ ಸಮೂಹದ  ಆಸ್ಪತ್ರೆಗಳಲ್ಲಿ ಶುಕ್ರವಾರದಿಂದ ಕೊರೋನಾವೈರಸ್ ರೋಗಿಗಳ  ಪರೀಕ್ಷೆ ಹಾಗೂ ಸ್ಕ್ರೀನಿಂಗ್ ಆರಂಭವಾಗಲಿದೆ. ಆರಂಭಿಕವಾಗಿ ಐದು ನಗರಗಳಲ್ಲಿ ಈ ಸೌಕರ್ಯ ಆರಂಭವಾಗಲಿದೆ ನಂತರ ಇತರೆಡೆಯೂ ಪ್ರಾರಂಭಿಸಲಾಗುವುದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾರ್ಗಸೂಚಿಯಂತೆ ಪ್ರತಿಯೊಂದು ಪರೀಕ್ಷೆಗೂ 4500ರೂ. ಶುಲ್ಕ ವಿಧಿಸಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಅಂತೆಯೇ, ಚೆನ್ನೈ, ಮುಂಬೈ, ಹೈದ್ರಾಬಾದ್, ಕೊಲ್ಕತ್ತಾ, ಬೆಂಗಳೂರು ಮತ್ತು ದೆಹಲಿಯಲ್ಲಿ 300 ಐಸೋಲೇಷನ್ ವಾರ್ಡ್ ಗಳನ್ನು ತೆರೆಯಲಾಗುತ್ತಿದೆ. ಆದರೆ,   ಕೋವಿಡ್-19 ರೋಗಿಗಳಿಗಾಗಿ  ದೇಶಾದ್ಯಂತ 5 ಸಾವಿರ ಕೊಠಡಿಗಳನ್ನು ಹೊಂದುವ  ಉದ್ದೇಶವಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ 50 ಕೊಠಡಿಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು,ಈ ಪ್ರಸ್ತಾವದಿಂದ ತಿಂಗಳಿಗೆ 10 ಸಾವಿರದಿಂದ 15 ಸಾವಿರ ರೋಗಿಗಳಿಗೆ ನೆರವಾಗಲಿದ್ದು, ಸುಮಾರು 50 ಲಕ್ಷ ಜನರಿಗೆ ಸೋಂಕು ಹರಡುವುದನ್ನು ತಡೆಯಲು ನೆರವಾಗಲಿದೆ ಎಂದು  ಅಪೊಲೊ ಆಸ್ಪತ್ರೆ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಗೀತಾ ರೆಡ್ಡಿ ತಿಳಿಸಿದ್ದಾರೆ.

18 ರಾಜ್ಯಗಳಲ್ಲಿರುವ 3800 ಔಷಧಾಲಯಗಳಲ್ಲಿನ ಸಂಗ್ರಹವನ್ನು ಹೆಚ್ಚಿಸಲಾಗುವುದು, ಇವುಗಳಿಂದ ಪ್ರಸ್ತುತ ಪ್ರತಿದಿನ 5 ಲಕ್ಷ ಜನರಿಗೆ ಸೇವೆ ಮಾಡುವ ಸಾಮರ್ಥ್ಯವಿದ್ದು, ಅವುಗಳನ್ನು ಅಗತ್ಯಬಿದ್ದರೆ 1 ಮಿಲಿಯನ್ ಗೆ ಹೆಚ್ಚಿಸಲಾಗುವುದು, ಮನೆ ವಿತರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು,  ಬೆಲೆಗಳ ಮೇಲೆ ನಿಗಾ ಇಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಕೊರೋನಾವೈರಸ್ ಸ್ಕ್ರೀನಿಂಗ್ ಹಾಗೂ ಪ್ರಾಥಮಿಕ ತಪಾಸಣೆಗಾಗಿ ಆಸ್ಪತ್ರೆ ಆರಂಭಿಸಿರುವ ಕೃತಕ ಬುದ್ದಿಮತ್ತೆ ಆಧಾರದ  ಸ್ಕ್ಯಾನ್ ಬಗ್ಗೆ ಆರು ಭಾಷೆಗಳಲ್ಲಿ ಲಭ್ಯವಿರುವ  ಆಪ್ ಮತ್ತು ವೆಬ್ ಸೈಟ್ ನಲ್ಲಿ ಮಾಹಿತಿ ದೊರೆಯಲಿದೆ.  ಈಗಾಗಲೇ ಸುಮಾರು 6 ಮಿಲಿಯನ್ ಜನರು ಆಪ್ ಮತ್ತು ವೆಬ್ ಸೈಟ್ ಮೂಲಕ ಮಾಹಿತಿ ಪಡೆದಿದ್ದು, ಸುಮಾರು  10 ಮಿಲಿಯನ್ ಜನರು ಈ ಸ್ಕ್ಯಾನ್ ಬಗ್ಗೆ ತಿಳಿಯುವ ನಿರೀಕ್ಷೆ ಹೊಂದಿರುವುದಾಗಿ ಅಪೊಲೊ ಕಾರ್ಯಕಾರಿ ಉಪಾಧ್ಯಕ್ಷೆ ಶೋಬಾನಾ ಕಾಮೆನಿ ತಿಳಿಸಿದ್ದಾರೆ. 

ಕೊರೋನಾವೈರಸ್  ಸಾಂಕ್ರಾಮಿಕ  ರೋಗಕ್ಕೆ ಯಾವುದೇ ಗಡಿ, ಧರ್ಮ, ಜಾತಿ, ಮತದ ಎಲ್ಲೆ ಇಲ್ಲ. ಇದರ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡುವುದು ಅಗತ್ಯವಾಗಿದೆ ಎಂದು  ಅಪೊಲೊ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಪ್ರತಾಪ್ ಸಿ ರೆಡ್ಡಿ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!