ಸಂಗ್ರಹ ಚಿತ್ರ 
ದೇಶ

ಲಾಕ್ ಡೌನ್ ನಡುವೆ ತನ್ನವಳ ಜತೆ ವಿವಾಹವಾಗಲು ಬೈಕಿನಲ್ಲಿ ಆಗಮಿಸಿದ ವರ!

ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ. 

ಬಿಜ್ನೂರ್(ಉತ್ತರ ಪ್ರದೇಶ): ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ. 

ತನ್ನ ದ್ವಿಚಕ್ರ ವಾಹನದಲ್ಲಿ ಮದುಮಗ ಹಾಗೂ ಆತನ ಹಿಂದೆ ಆತನ ತಂದೆ, ಹಾಗೂ ಇಬ್ಬರು ಸ್ನೇಹಿತರು ವಧುವಿನ ಮನೆಗೆ ತೆರಳಿದ್ದಾರೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆದು ಮದುಮಗಳ ಸಮೇತ ಹಿಂತಿರುಗಿದ್ದಾರೆ.

ಕೊರೋನಾ ಭೀತಿಯ ನಡುವೆ ನಡೆದ ಈ ವಿವಾಹವು  ಜತನ್ ಮೊಹಲ್ಲಾ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿಎ.

ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನಸೀರ್‌ಪುರ ಗ್ರಾಮದ ವರ ವಿಕಾಸ್ ಕುಮಾರ್ (22) ಕಳೆದ 18 ತಿಂಗಳಿನಿಂದ ತನ್ನ ಮದುವೆಗೆ ಸಿದ್ದವಾಗಿ ಕಾಯುತ್ತಿದ್ದ. ವಿಕಾಸ್ ತನ್ನ ವಿವಾಹ ವಿಜ್ರಂಭಣೆಯಿಂದ ನಡೆಯಬೇಕೆಂದು ಬಯಸಿದ್ದ ಮತ್ತು ಅದಕ್ಕೆ ತಕ್ಕ ತಯಾರಿ ಕೂಡ ನಡೆದಿತ್ತು,ಹಾಗಿದ್ದರೂ ಕೊರೋನಾ ಹಾವಳಿ ಕಾರಣ ದೇಶವ್ಯಾಪಿ ಲಾಕ್ ಡೌನ್ ಆಗಿ ಅವರ ಯೋಜನೆಗಳು ತಲೆಕೆಳಗಾಗಿದೆ.  ಆದರೆ ವಿಕಾಸ್ ಗೆ ಮದುವೆಯನ್ನು ಮುಂದೂಡಲು ಇಷ್ಟವಿರಲಿಲ್ಲ.

ಮದುವೆಯಲ್ಲಿ ಬಾಗವಹಿಸಿದ ವಧು-ವರ ಸೇರಿದಂತೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟ್ರೇಜರ್  ಗಳನ್ನು ಬಳಸಿದ್ದಾರೆ."ಭವ್ಯವಾದ ವಿವಾಹ ನಡೆಯಬೇಕೆಂದು ನಾನು ಕನಸು ಕಂಡಿದ್ದೆ. ಆದರೆ ಈ ಸಮಯದಲ್ಲಿ ನಾವು ಮದುವೆಯಾಗಿದ್ದು ನನಗಿನ್ನೂ ಸಂತಸ ತಂದಿದೆ. ಲಾಕ್ ಡೌನ್ ತೆಗೆದುಹಾಕಿದ ನಂತರ, ನಾವು ಸಂಭ್ರಮ ಆಚರಿಸಿಕೊಳ್ಳುತ್ತೇವೆ" ಅವರು ಸ್ಥಳೀಯ ವರದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT