ಸಂಗ್ರಹ ಚಿತ್ರ 
ದೇಶ

ಕೊರೋನಾ ವೈರಸ್; ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದ್ರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಹೈದರಾಬಾದ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಹೈದ್ರಾಬಾದ್; ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಹೈದರಾಬಾದ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಹೈದ್ರಾಬಾದ್ ವಿಶ್ವವಿದ್ಯಾಲಯದ ಜೀವ ರಸಾಯನ ವಿಭಾಗದ ಅಧ್ಯಾಪಕ ವರ್ಗ ಕೊರೋನಾ ವೈರಸ್ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ದೇಶಕ್ಕೆ ಮತ್ತು ವಿಶ್ವಕ್ಕೇ ಸ್ವಾಗತಾರ್ಹ ಅನ್ವೇಷಣೆಯೊಂದನ್ನು ಕಂಡುಹಿಡಿದಿದ್ದಾರೆ. ಸ್ಕೂಲ್ ಆಫ್ ಲೈಫ್ ಸೈನ್ಸ್ ಜೀವ ರಾಸಾಯನಿಕ  ವಿಭಾಗದ ಅಧ್ಯಾಪಕ ಡಾ. ಸೀಮಾ ಮಿಶ್ರಾ ಅವರು ಟಿ ಸೆಲ್ ಎಪಿಟೋಪ್ಸ್ ಎಂದು ಕರೆಯಲ್ಪಡುವ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಕೊರೋನಾ ವೈರಸ್ ವಿರುದ್ಧದ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಲಾಗಿದೆ.

ಈ ಕುರಿತಂತೆ ಹೈದ್ರಾಬಾದ್ ವಿಶ್ವವಿದ್ಯಾಲಯದ ಜೀವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ಮಾಹಿತಿ ನೀಡಿದ್ದು, ' ಮೂಲಗಳ ಪ್ರಕಾರ, ಈ ಲಸಿಕೆ ಮಾನವನ ದೇಹದಲ್ಲಿ ಕೊರೋನಾ ವೈರಸ್ ಪೆಪ್ಟೈಡ್ಸ್‌ಗಳು ಆಶ್ರಯಿಸುವ ಕೋಶಗಳನ್ನು ನಾಶ  ಮಾಡುತ್ತವೆ. ಅಲ್ಲದೆ, ದೇಹದಲ್ಲಿ ಜೀವ ನಿರೋಧಕ ಶಕ್ತಿಯ ಕೋಶಗಳನ್ನು ಹೆಚ್ಚಿಸುವ ಮೂಲಕ ಕೊರೋನಾ ವಿರುದ್ಧ ದೇಹವೇ ನೈಸರ್ಗಿಕವಾಗಿ ಹೋರಾಟ ನಡೆಸುವಂತೆ ಅಭಿವೃದ್ಧಿಪಡಿಸಲಾಗಿದೆ. ಹೀಗೆ ಅಭಿವೃದ್ಧಿಪಡಿಸಲಾದ ಈ ಲಸಿಕೆಯನ್ನು ಎಲ್ಲಾ ಸೋಂಕಿತರಿಗೂ ನೀಡಬಹುದು  ಎಂದು ಹೇಳಿದ್ದಾರೆ. 

ಅಡ್ಡಪರಿಣಾಮವಿಲ್ಲ
ಈ ಲಸಿಕೆಯ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು ಎಂದು ಹೇಳಲಾಗುತ್ತಿದೆ. ಇದರ ಅಧ್ಯಯನ ಸಂಪೂರ್ಣವಾಗಿ ಮುಗಿದಿದ್ದು,  ಆದರೂ ಈ ಸಂಶೋಧನೆ ನಿರ್ಣಾಯಕ ಅಂಗೀಕಾರ ಪಡೆಯಲು ವೈಜ್ಞಾನಿಕ ಸಮುದಾಯ ವಿಟ್ರೋ ಅಧ್ಯಯನ  ನಡೆಸಬೇಕಾಗಿದೆ. ಈ ಅಧ್ಯಯನದ ನಂತರ ಈ ಲಸಿಕೆ ಬಳಕೆಗೆ ಮುಕ್ತವಾಗಲಿದೆ ಎಂದು ಹೈದ್ರಾಬಾದ್ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಇನ್ನು ಇಂತಹ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ ಕನಿಷ್ಟ ಎಂದರೂ 10ಕ್ಕೂ ಹೆಚ್ಚು ವರ್ಷ ಅಗತ್ಯವಿರುತ್ತದೆ. ಆದರೆ, ಪರಿಸ್ಥಿತಿಯನ್ನು  ಅರಿತಿರುವ ಪ್ರಾಧ್ಯಾಪಕರು ಪ್ರಬಲ ಪರಿಕರಗಳನ್ನು ಬಳಸಿ ಕೇವಲ 10 ದಿನಗಳಲ್ಲಿ ಈ ಔಷಧವನ್ನು ತ್ವರಿತವಾಗಿ ವಿನ್ಯಾಸಗೊಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ