ದೇಶ

ಕನಸಿನಲ್ಲಿ ಬಂದ ಶಿವ, ತನ್ನ ಮರ್ಮಾಂಗವನ್ನೇ ಅರ್ಪಿಸಿದ ಕೈದಿ, ಸಾವು-ಬದುಕಿನ ಹೋರಾಟ!

Vishwanath S

ಗ್ವಾಲಿಯಾರ್: 25 ವರ್ಷದ ಕೈದಿಯೊಬ್ಬ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಧ್ಯಪ್ರದೇಶದ ಗ್ವಾಲಿಯಾರ್ ನಗರದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ವಿಷ್ಣು ಕುಮಾರ್ ಎಂಬಾತ ಕೊಲೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಬೆಳಗ್ಗೆ 6.30ರ ಸುಮಾರಿಗೆ ಆತ ಕಾರಾಗೃಹದಲ್ಲಿರುವ ಶಿವನ ದೇವಸ್ಥಾನದ ಮುಂದೆ ಪ್ರಾರ್ಥಿಸಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಜೈಲು ಅಧೀಕ್ಷಕ ಮನೋಜ್ ಸಾಹು ಹೇಳಿದ್ದಾರೆ. 

ತೀವ್ರ ನೋವಿನಿಂದ ಅಳುತ್ತಿದ್ದ ವಿಷ್ಣು ಕುಮಾರ್ ನನ್ನು ಗಮನಿಸಿದ ಸಹ ಕೈದಿಗಳು ಜೈಲು ಅಧೀಕ್ಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಗೆ ಬಂದ ಅಧಿಕಾರಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡ ಬಗ್ಗೆ ವಿಚಾರಿಸಿದಾಗ ಸಾಹು, ತನ್ನ ಕನಸಿನಲ್ಲಿ ಶಿವ ಪರಮಾತ್ಮ ಬಂದಿದ್ದು ಅವನ ಇಚ್ಛೆಯಂತೆ ನಾನು ನನ್ನ ಮರ್ಮಾಂಗವನ್ನು ಅರ್ಪಿಸಿದ್ದೇನೆ ಎಂದು ಹೇಳಿದ್ದಾನೆ.

SCROLL FOR NEXT