ದೇಶ

ರೈಲು ಹಳಿಗಳ ಮೇಲೆ ವಲಸಿಗ ಕಾರ್ಮಿಕರ ಸಾವು: ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಹೆಚ್ಚುವರಿ ಪರಿಹಾರಕ್ಕೆ ಪ್ರಧಾನಿ ಒಪ್ಪಿಗೆ 

Srinivas Rao BV

ನವದೆಹಲಿ: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿಗಳ ಮೇಲೆ ಸಾವನ್ನಪ್ಪಿದ 16 ವಲಸಿಗ ಕಾರ್ಮಿಕರ ಕುಟುಂಬ ಸದಸ್ಯರುಗಳಿಗೆ ಮಾನವೀಯ ನೆಲೆಯಲ್ಲಿ (ex gratia) ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಿದ್ದಾರೆ. 

ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಪರಿಹಾರ ಮೊತ್ತ ಮೃತ ಸಂತ್ರಸ್ತರ ಕುಟುಂಬಗಳಿಗೆ ತಲುಪಲಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ದೊರೆಯಲಿದೆ. 
 
ಮೃತರ ವಿವರಗಳು ಹಾಗೂ ಪರಿಹಾರಕ್ಕಾಗಿ ಅಗತ್ಯವಿರುವ ಅನುದಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪ್ರಧಾನಿಗಳ ಕಾರ್ಯಾಲಯ ರೈಲ್ವೆ ಇಲಾಖೆಯನ್ನು ಕೇಳಿದೆ. 

SCROLL FOR NEXT