ಮಧ್ಯಪ್ರದೇಶ: ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ! 
ದೇಶ

ಮಧ್ಯ ಪ್ರದೇಶ: ಬಿಸಿ ಚಪಾತಿ ಕೊಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!

ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಅಳಿಯ ಹೊಡೆದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. 

ಖಂದ್ವ: ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಅಳಿಯ ಹೊಡೆದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. 

35 ವರ್ಷದ ವ್ಯಕ್ತಿ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿ ಸುರೇಶ್, ಖಂದ್ವ ಜಿಲ್ಲೆಯ ಬಿಲ್ಲೋರ ಗ್ರಾಮದಲ್ಲಿ ಅತ್ತೆ ಮಾವನೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಜಗದೀಶ್ ಪಾಟೀದಾರ್ ಹೇಳಿದ್ದಾರೆ. ಮಧ್ಯರಾತ್ರಿ ವೇಳೆ ಮನೆಗೆ ಆಗಮಿಸಿದ್ದ ಆರೋಪಿಗೆ ಆತನ ಅತ್ತೆ ಗುಜರ್ ಬಾಯಿ (55) ಊಟ ಬಡಿಸಿದ್ದರು.

ಆದರೆ ಆರೋಪಿ ಬಿಸಿ ಚಪಾತಿ ಕೇಳಿದ್ದ, ಇದಕ್ಕೆ ಒಪ್ಪದ ಅತ್ತೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಆಕೆ ಸಾವನ್ನಪ್ಪಿದ್ದಾರೆ.  ಉಳಿದ ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಯ ಮಾವ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ರಾತ್ರಿ ಆರೋಪಿ ಸುರೇಶ್ ನ್ನು ಪೊಲೀಸರು ಬಂಧಿಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT