ಕುದುರೆಯ ಚಿತ್ರ 
ದೇಶ

ಕೋವಿಡ್-19: ಕಾಶ್ಮೀರದಿಂದ ರಜೌರಿವರೆಗೂ ಮಾಲೀಕನನ್ನು ಕರೆದೊಯ್ದ ಕುದುರೆಗೆ 'ಹೋಮ್ ಕ್ವಾರಂಟೈನ್' 

ಕಾಶ್ಮೀರದಿಂದ ಜಮ್ಮ ವಲಯದ ರಜೌರಿ ಜಿಲ್ಲೆಯವರೆಗೂ ತನ್ನ ಮಾಲೀಕನನ್ನು ಕರೆದೊಯ್ದ ಕುದುರೆಯೊಂದಕ್ಕೆ ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಜಮ್ಮು: ಕಾಶ್ಮೀರದಿಂದ ಜಮ್ಮ ವಲಯದ ರಜೌರಿ ಜಿಲ್ಲೆಯವರೆಗೂ ತನ್ನ ಮಾಲೀಕನನ್ನು ಕರೆದೊಯ್ದ ಕುದುರೆಯೊಂದಕ್ಕೆ ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಮುಘಲ್ ರಸ್ತೆ ಮಾರ್ಗವಾಗಿ ಕಣಿವೆ ರಾಜ್ಯದಿಂದ ಕುದುರೆ ಮೂಲಕ ಮಾಲೀಕನನ್ನು ಕರೆದೊಯ್ದ ನಂತರ ಮುಂಜಾಗ್ರತಾ ಕ್ರಮವಾಗಿ ಕುದುರೆಯನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಗೊಳಿಸುವಂತೆ ರಾಜೌರಿಯ ಕುಟುಂಬವೊಂದಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಫಿಯನ್ ನಿಂದ ತವರು ಜಿಲ್ಲೆ ರಜೌರಿಗೆ ಆಗಮಿಸಿದ ಬಳಿಕ ಕುದುರೆ ಸವಾರನನ್ನು ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ ಎಂದು ತಾನಾಮಂಡಿ ತಹಸೀಲ್ದಾರ್ ಅಂಜುಮ್ ಬಸೀರ್ ಖಾನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಕುದುರೆ ಸವಾರಿ ಮಾಡಿದ ವ್ಯಕ್ತಿಯನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದ್ದು, ಕೋವಿಡ್-19 ಪರೀಕ್ಷೆಗಾಗಿ ಆತನ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ. 

ರಜೌರಿ ಸೇರಿದಂತೆ ಜಮ್ಮು ವಲಯದ ಇತರ ನಾಲ್ಕು ಜಿಲ್ಲೆಗಳನ್ನು ಕಳೆದ ವಾರ ಹಸಿರು ವಲಯ ಎಂದು ಘೋಷಿಸಲಾಗಿದೆ. ಆದರೆ, ಶೋಫಿಯನ್ ಸೇರಿದಂತೆ ಇತರ 10 ಜಿಲ್ಲೆಗಳು ಕೆಂಪು ವಲಯದಲ್ಲಿವೆ. ರೆಡ್ ವಲಯದಿಂದ ಹಸಿರು ವಲಯಕ್ಕೆ ತೆರಳಬೇಕಾದರೆ ಅನುಮತಿ ಅಗತ್ಯವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!