ಲಡಾಕ್ ಬಿಕ್ಕಟ್ಟು:  ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ಚೀನಾ ಗಡಿಯಲ್ಲಿ ನಿಯೋಜಿಸಿದ ವಾಯುಪಡೆ 
ದೇಶ

ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್‌ ಹೆವಿ ಲಿಫ್ಟ್‌ ಕಾಪ್ಟರ್‌ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ

ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ. 

ಅರುಣಾಚಲ ಪ್ರದೇಶ: ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ. 

ಶಿಲ್ಲಾಂಗ್ ಬೇಸ್ ನ ರಕ್ಷಣಾ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿಹೆಚ್-47 ಚಿನೂಕ್ ಮಲ್ಟಿ ಮಿಷನ್ ಹೆಲಿಕಾಫ್ಟರ್ ಗಳು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಕಾರ್ಯಾಚರಣೆಯಲ್ಲಿದ್ದು, ದೇಶದ ಸೇವೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹೆಲಿಕಾಫ್ಟರ್ ಗಳು ಐಎಎಫ್ ಗೆ ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಸಾಟಿಯಿಲ್ಲದ ಏರ್ಲಿಫ್ಟ್ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.

ಈಗಿರುವ ಎಂಐ-17 ಗೆ ಹೋಲಿಕೆ ಮಾಡಿದರೆ ಈ ಚಿನೂಕ್ ಹೆಲಿಕಾಫ್ಟರ್ ಗಳು ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡುವ ಸಾಮರ್ಥ್ಯಗಳನ್ನು ಹೊಂದಿದ್ದು ಎಂಐ-17 ಗಿಂತಲೂ ಹೆಚ್ಚಿನ ತೂಕ ಹೊತ್ತು ಸಾಗುವ ಸಾಮರ್ಥ್ಯವಿದೆ.

ಎಂಐ-17 24 ಪ್ರಯಾಣಿಕರು ಹಾಗೂ ಸಣ್ಣ ವಾಹನಗಳನ್ನು ಸೇರಿದಂತೆ 4,000 ಕೆಜಿ ಆಂತರಿಕ ಪೇಲೋಡ್ ಸಾಮರ್ಥ್ಯ ಹೊಂದಿದ್ದರೆ ಚಿನೂಕ್ ಹೆಲಿಕಾಫ್ಟರ್ ಗಳು 22,000lb (10,000 ಕೆ.ಜಿ)ಯಷ್ಟು ಸರಕು ಅಥವಾ ಸಂಪೂರ್ಣವಾಗಿ ಶಸ್ತ್ರಸಜ್ಜಿತಗೊಂಡಿರುವ 55 ಸೇನಾ ತುಕಡಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಅರುಣಾಚಲ ಪ್ರದೇಶದ ಭಾಗದಲ್ಲಿ ಈ ಚಿನೂಕ್ ಹೆಲಿಕಾಫ್ಟರ್ ಗಳನ್ನು ನಿಯೋಜಿಸುತ್ತಿರುವುದು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಮಾದರಿಯ ಒಂದು ಹೆಲಿಕಾಫ್ಟರ್ ನ್ನು ಗುರುವಾರ ಅಗತ್ಯ ಸರಕುಗಳೊಂದಿಗೆ ಅರುಣಾಚಲ ಪ್ರದೇಶದ ಚಂಗ್ಲಾಂಗ್ ನ ವಿಜೋಯ್ ನಗರ್ ಸರ್ಕಲ್ ಗೆ ಕಳುಹಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT