ಭಕ್ತಾದಿಗಳ ಅನುಪಸ್ಥಿತಿಯಲ್ಲಿ ನಡೆಯಲಿದೆ ಪುರಿ ರಥಯಾತ್ರೆ: ನೇರ ಪ್ರಸಾರಕ್ಕೆ ವ್ಯವಸ್ಥೆ 
ದೇಶ

ಭಕ್ತಾದಿಗಳ ಅನುಪಸ್ಥಿತಿಯಲ್ಲಿ ನಡೆಯಲಿದೆ ಪುರಿ ರಥಯಾತ್ರೆ: ನೇರ ಪ್ರಸಾರಕ್ಕೆ ವ್ಯವಸ್ಥೆ

ಭಕ್ತಾದಿಗಳ ಅನುಪಸ್ಥಿತಿಯನ್ನು ಒಡಿಶಾ ಸರ್ಕಾರ ಖಚಿತಪಡಿಸಿದರೆ ಒಡಿಶಾದ ಜಗನ್ನಾಥ ರಥಯಾತ್ರೆ ನಡೆಸಬಹುದೆಂದು ಪುರಿ ಗಜಪತಿ ದಿವ್ಯ ಸಿಂಗ ದೇವ್ ಹೇಳಿದ್ದಾರೆ. 

ಭುವನೇಶ್ವರ್: ಭಕ್ತಾದಿಗಳ ಅನುಪಸ್ಥಿತಿಯನ್ನು ಒಡಿಶಾ ಸರ್ಕಾರ ಖಚಿತಪಡಿಸಿದರೆ ಒಡಿಶಾದ ಜಗನ್ನಾಥ ರಥಯಾತ್ರೆ ನಡೆಸಬಹುದೆಂದು ಪುರಿ ಗಜಪತಿ ದಿವ್ಯ ಸಿಂಗ ದೇವ್ ಹೇಳಿದ್ದಾರೆ. 

ಪುರಿ ಜಗನ್ನಾಥ ದೇವಾಲಯ ವ್ಯವಸ್ಥಾಪಕ ಸಮಿತಿ ಸಭೆಯ ನಂತರ ಮಾತನಾಡಿರುವ ಪುರಿ ಗಜಪತಿ ದಿವ್ಯ ಸಿಂಗ ದೇವ್, ಸರ್ಕಾರ ಅನುಮತಿ ನೀಡಿದರೆ ಕೆಲವೇ ಕೆಲವು ಸೇವಕರ ಹಾಜರಿಯಲ್ಲಿ, ಭಕ್ತಾದಿಗಳ ಅನುಪಸ್ಥಿತಿಯಲ್ಲಿ ರಥಯಾತ್ರೆ ನಡೆಸಬಹುದೆಂಬ ಅಭಿಪ್ರಾಯ ತಿಳಿಸಿದ್ದಾರೆ.

ರಥಯಾತ್ರೆ, ಬಹುದ ಯಾತ್ರೆಗಳನ್ನು ಸೇವಕರು, ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ರಥಬೀದಿಯಲ್ಲಿ ನಡೆಯಲಿದ್ದು, ಸ್ನಾನ ಯಾತ್ರೆಯನ್ನು ಜೂ.05 ರಂದು ನಿಗದಿಪಡಿಸಲಾಗಿದೆ ಇದನ್ನು ದೇವಾಲಯದ ಪ್ರಾಂಗಣದಲ್ಲೇ ನಡೆಸಬಹುದಾಗಿದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ನಿರ್ಧಾರವಾಗಿದೆ. 

ಇನ್ನು ಸ್ನಾನ ಯಾತ್ರೆ ಹಾಗೂ ರಥ ಯಾತ್ರೆಗಳನ್ನು ನೇರ ಪ್ರಸಾರಕ್ಕೆ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!