ಸಂಗ್ರಹ ಚಿತ್ರ 
ದೇಶ

ತನ್ನ ಮಾಲಿಕನನ್ನು ಗುರುತಿಸಲು ಸ್ವತಃ ಎಮ್ಮೆಗೆ ಜವಾಬ್ದಾರಿ: ಉತ್ತರ ಪ್ರದೇಶ ಪೊಲೀಸರ ವಿನೂತನ ವಿಧಾನ!

ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. 

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. 

ಕನೌಜ್ ನಲ್ಲಿ ವಿರೇಂದ್ರ ಎಂಬುವವರು ತಮ್ಮ ಎಮ್ಮೆ ಕಳ್ಳತನವಾಗಿದೆ, ತಮ್ಮ ಸ್ನೇಹಿತ ತಮ್ಮ ಎಮ್ಮೆಯನ್ನು ಕಳ್ಳತನ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಮಾಧವ್ ಪುರದ ಧರ್ಮೇಂದ್ರ ವಿರುದ್ಧ ತಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಆದರೆ ಧರ್ಮೇಂದ್ರ ಹೇಳುವ ಪ್ರಕಾರ ಎಮ್ಮೆ ತಮ್ಮದೇ ಎಂದು ವಾದಿಸುತ್ತಿದ್ದರು. ಇದರಿಂದ ಬೇಸತ್ತ ಪೊಲೀಸರು ಎಮ್ಮೆ ಮಾಲಿಕ ಯಾರೆಂಬುದನ್ನು ಕಂಡುಹಿಡಿಯಲು ವಿನೂತನ ಮಾದರಿಯನ್ನು ಅನುಸರಿಸಿದ್ದಾರೆ. 

ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕಾಂತ್ ಮಿಶ್ರಾ ಎಮ್ಮೆಯನ್ನು ಪೊಲೀಸ್ ಠಾಣೆಗೇ ಕರೆಸಿ, ಇಬ್ಬರೂ ವ್ಯಕ್ತಿಗಳಿಗೆ ಎಮ್ಮೆಯನ್ನು ತಮ್ಮ ಬಳಿ ಕರೆಯುವಂತೆ ಸೂಚಿಸದರು, ಎಮ್ಮೆ ಯಾರ ಬಳಿ ತೆರಳುತ್ತದೆಯೋ ಅವರೇ ಎಮ್ಮೆಯ ಮಾಲಿಕರೆಂದು ನಿರ್ಧರಿಸುವುದಾಗಿ ಪೊಲೀಸರು ತಿಳಿಸಿದ್ದರು. 

ಪೊಲೀಸರ ಸೂಚನೆಯಂತೆ ನಡೆದ ಪ್ರಕ್ರಿಯೆಯಲ್ಲಿ ಎಮ್ಮೆ ತನ್ನ ಮಾಲಿಕನನ್ನು ತಕ್ಷಣವೇ ಗುರುತಿಸಿದ್ದು, ಧರ್ಮೇಂದ್ರ ಕರೆದ ತಕ್ಷಣ ಆತನ ಬಳಿ ಹೋಗಿ ವಿರೇಂದ್ರ ಅವರನ್ನು ನಿರ್ಲಕ್ಷ್ಯಿಸಿತು. ಈ ಹಿನ್ನೆಲೆಯಲ್ಲಿ ಧರೇಂದ್ರ ಅವರಿಗೇ ಎಮ್ಮೆಯನ್ನು ವಾಪಸ್ ಕೊಟ್ಟು ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ