ರಫೇಲ್ ಯುದ್ಧ ವಿಮಾನಗಳು 
ದೇಶ

ನವೆಂಬರ್ ಮೊದಲ ವಾರದಲ್ಲಿ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ

ಚೀನಾ ಜೊತೆಗಿನ ಗಡಿ ಸಂಘರ್ಘ ಮುಂದುವರೆದಿರುವಂತೆಯೇ,ನವೆಂಬರ್ ಮೊದಲ ವಾರದಲ್ಲಿ ಹರಿಯಾಣದ ಅಂಬಲಾ ವಾಯುನೆಲೆಗೆ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳ ಆಗಮನವೊಂದಿಗೆ ಭಾರತೀಯ ವಾಯುಪಡೆಯ ಸಾಮರ್ಥ್ಯ ಮತ್ತಷ್ಟ ಪ್ರಬಲವಾಗಲಿದೆ.

ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಘ ಮುಂದುವರೆದಿರುವಂತೆಯೇ,ನವೆಂಬರ್ ಮೊದಲ ವಾರದಲ್ಲಿ ಹರಿಯಾಣದ ಅಂಬಲಾ ವಾಯುನೆಲೆಗೆ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳ ಆಗಮನವೊಂದಿಗೆ ಭಾರತೀಯ ವಾಯುಪಡೆಯ ಸಾಮರ್ಥ್ಯ ಮತ್ತಷ್ಟ ಪ್ರಬಲವಾಗಲಿದೆ.

ಫ್ರೆಂಚ್ ದೇಶದಿಂದ ತಯಾರಿಸಲ್ಪಟ್ಟಿರುವ ಯುದ್ಧ ವಿಮಾನಗಳು ಎರಡನೇ ಹಂತದಲ್ಲಿ ಭಾರತಕ್ಕೆ ಆಗಮಿಸುತ್ತಿವೆ.ಮೊದಲ ಹಂತದ ಐದು ಯುದ್ಧ ವಿಮಾನಗಳು ಜುಲೈ 28 ರಂದು ಭಾರತಕ್ಕೆ ಆಗಮಿಸಿದ್ದವು. ಅವುಗಳನ್ನು ಸೆಪ್ಟೆಂಬರ್ 10 ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ನರೇಂದ್ರ ಮೋದಿ ಸರ್ಕಾರ ಸೇರ್ಪಡೆಗೊಳಿಸಿತ್ತು.

ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕಾಗಿ ದೇಶದಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಪಡೆಗೆ 8-9 ಯುದ್ಧ ವಿಮಾನಗಳು ಸೇರಿದಂತಾಗಲಿದ್ದು, ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕೆಲ ದಿನಗಳು ಇವುಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಹೇಳಲಾಗಿದೆ.

ರಫೆಲ್ ಯುದ್ಧ ವಿಮಾನಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು, ಲಡಾಖ್ ಸಂಘರ್ಷದ ವಲಯದಲ್ಲಿ ಸ್ವಲ್ಪ ಕಾಲ ಭಾರತೀಯ ವಾಯುಪಡೆಯೊಂದಿಗೆ ನಿಯೋಜಿಸಲಾಗಿತ್ತು.

ಅಸಿಸ್ಟೆಟ್ ಚೀಫ್ ಆಫ್ ಏರ್ ಸ್ಟಾಪ್ ( ಪ್ರಾಜೆಕ್ಟ್ ) ಏರ್ ವೈಸ್ ಮಾರ್ಷಲ್ ಎನ್ ತಿವಾರಿ ನೇತೃತ್ವದಲ್ಲಿನ ತಂಡ ಭಾರತೀಯ ವಾಯುಪಡೆ ತಂಡ ವಾರ್ಷಿಕ ನಿಯಮಿತ ಸಭೆಯ ಭಾಗವಾಗಿ ಯೋಜನೆ ಪರಾಮರ್ಶೆಗಾಗಿ ಫ್ರಾನ್ಸ್ ನಲ್ಲಿದ್ದು, ಅಲ್ಲಿ ಭಾರತೀಯ ಪೈಲಟ್ ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಾರ್ಚ್ 2021ರೊಳಗೆ ಭಾರತೀಯ ಕಡೆಯವರ ತರಬೇತಿ ಹಂತ ಸಂಪೂರ್ಣವಾಗಿ ಮುಗಿಯುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳದಲ್ಲಿನ ಹಶಿಮಾರಾ  ಮತ್ತು ಹರಿಯಾಣದ ಅಂಬಲಾ ವಾಯುನೆಲೆಯಲ್ಲಿ ಪ್ರತಿಯೊಂದು ರಫೇಲ್ ಯುದ್ಧ ವಿಮಾನಗಳಿಗೂ ಒಂದೊಂದು ಸ್ಕ್ವಾಡ್ರೋನ್ ನನ್ನು ಭಾರತೀಯ ವಾಯುಪಡೆ ನಿಯೋಜಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT