ದೇಶ

ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಕೋವಿಡ್-19ನ್ನು ಒಂದು ನೆಪ ಮಾಡಿಕೊಂಡಿದೆ:ಎನ್ ಸಿಪಿ ಆರೋಪ

Sumana Upadhyaya

ನವದೆಹಲಿ: ತನ್ನ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲು ಬಿಜೆಪಿ ಕೋವಿಡ್-19ನ ಕಾರಣವನ್ನು ಒಂದು ನೆಪವಾಗಿ ತೆಗೆದುಕೊಳ್ಳುತ್ತಿದೆ ಎಂದು ವಿರೋಧ ಪಕ್ಷ ಎನ್ ಸಿಪಿ ಆರೋಪಿಸಿದೆ.

ಪ್ರಶ್ನೋತ್ತರ ಅವಧಿ ಇಲ್ಲದಿದ್ದರೆ, ಸಂಸತ್ತು ಕಲಾಪದಲ್ಲಿ ಸರ್ಕಾರವನ್ನು ವಿರೋಧ ಪಕ್ಷಗಳು ಪ್ರಶ್ನೆ ಮಾಡಲು ಬದಲಿ ವಿದ್ಯುನ್ಮಾನ ವಿಧಾನಗಳನ್ನು ಬಳಸಲಿ ಎಂದು ಕೂಡ ಎನ್ ಸಿಪಿ ಹೇಳಿದೆ.

ಮುಂಗಾರು ಅಧಿವೇಶನದಲ್ಲಿ ಹಲವು ವಿಷಯಗಳಲ್ಲಿ ತನ್ನ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿಯು ಕೊರೋನಾ ಸಾಂಕ್ರಾಮಿಕ ಸಮಸ್ಯೆಯನ್ನು ಒಂದು ನೆಪವಾಗಿಟ್ಟುಕೊಂಡು ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಿದೆ ಎಂದು ಎನ್ ಸಿಪಿ ವಕ್ತಾರ ಮಹೇಶ್ ತಾಪಸೆ ಆರೋಪಿಸಿದ್ದಾರೆ.

ಮತ್ತೊಬ್ಬ ಎನ್ ಸಿಪಿ ವಕ್ತಾರ ಸೈಡ್ ಕ್ರಸ್ಟೊ ಕಾರ್ಟೂನ್ ಮೂಲಕ ಪ್ರಶ್ನೋತ್ತರ ಅವಧಿ ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಮುಂಬರುವ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ, ಖಾಸಗಿ ಮಸೂದೆ ಮಂಡನೆಗೆ ಅವಕಾಶವಿರುವುದಿಲ್ಲ. ಶೂನ್ಯ ಅವಧಿಯನ್ನು ಮೊಟಕುಗೊಳಿಸಲಾಗಿದೆ.

SCROLL FOR NEXT