ಸಂಗ್ರಹ ಚಿತ್ರ 
ದೇಶ

ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಗೆ ಡಿಸಿಜಿಐ ಅನುಮತಿ

ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.

ನವದೆಹಲಿ: ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.

ಬ್ರಿಟನ್ ಮೂಲದ ಆಸ್ಟ್ರಾ ಜೆನಿಕಾ ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರಲ್ಲಿ ಆರೋಗ್ಯ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ಭಾರತದಲ್ಲೂ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳ ಪ್ರಯೋಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕಳೆದ ಶನಿವಾರ ಬ್ರಿಟನ್ ಸರ್ಕಾರ ಆಸ್ಟ್ರಾ ಜೆನಿಕಾ  ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗ ಮುಂದುವರೆಸಲು ಅನುಮತಿ ನೀಡಿದೆ. ಬ್ರಿಟನ್ ನ ಮೆಡಿಸಿನ್ ಹೆಲ್ತ್ ರೆಗ್ಯುಲೇಟರಿ ಅಥಾರಿಟಿ ಆಸ್ಟ್ರಾ ಜೆನಿಕಾ ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗ ಸುರಕ್ಷಿತವಾಗಿದೆ ಎಂದು ವರದಿ ನೀಡಿದ ಬಳಿಕ ಬ್ರಿಟನ್ ಸರ್ಕಾರ ಈ ಅನುಮತಿ ನೀಡಿದೆ.

ಹೀಗಾಗಿ ಇದೀಗ ಭಾರತದಲ್ಲಿ ಕೋವಿಡ್ ಲಸಿಕೆಗಳ ಪ್ರಯೋಗ ಮುಂದುವರೆಯಲಿದ್ದು, ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ DCGI ಅನುಮತಿ ನೀಡಿದೆ. ಆದರೆ ಈ ಅನುಮತಿಗೂ ಡಿಸಿಜಿಐ ಹಲವು ಷರತ್ತುಗಳನ್ನು ವಿಧಿಸಿದ್ದು, ಸ್ಕ್ರೀನಿಂಗ್  ಸಮಯದಲ್ಲಿ ಸ್ವಯಂಸೇವಕರ ಹೆಚ್ಚಿನ ಕಾಳಜಿ ವಹಿಸುವುದು, ಸ್ವಯಂಸೇವಕರೊಂದಿಗೆ ಒಪ್ಪಿಗೆ ಪ್ರಮಾಣ ಪತ್ರದಲ್ಲಿ ಪ್ರಯೋಗದ ಕುರಿತು ಹೆಚ್ಚಿನ ಮಾಹಿತಿ ನೀಡುವುದು, ಪ್ರತಿಕೂಲ ಘಟನೆಗಳಿಗೆ ನಿಕಟ ಮೇಲ್ವಿಚಾರಣೆ, ಸ್ವಯಂ ಸೇವಕರ ಫಾಲೋಅಪ್ ತನಿಖಾ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಬಳಿಕ  ಮುಂದಿನ ಕ್ರಮ ಅನುಸರಿಸಬೇಕು ಎಂಬಿತ್ಯಾದಿ ಅಂಶಗಳು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. 

ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತನ್ನ ಆಕ್ಸ್ ಫರ್ಡ್ ಲಸಿಕೆಯ 2 ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಸ್ವಯಂ ಸೇವಕರ ನೇಮಕಾತಿಗೆ ಮುಂದಾಗಿತ್ತು. ಆದರೆ ಆಸ್ಟ್ರಾ ಜೆನಿಕಾ ಘಟನೆ ಬಳಿಕ ಲಸಿಕೆ ಪ್ರಯೋಗ ಸಂಬಂಧ ಹೊಸ ನೇಮಕಾತಿ (ಸ್ವಯಂ ಸೇವಕರು) ಮಾಡಿಕೊಳ್ಳದಂತೆ ಸೆರೆಮ್ ಇನ್ಸ್  ಟಿಟ್ಯೂಟ್ ಆಫ್ ಇಂಡಿಯಾಗೆ ಡಿಸಿಜಿಐ ಸೂಚನೆ ನೀಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT