ಸಾಂದರ್ಭಿಕ ಚಿತ್ರ 
ದೇಶ

ಒಡಿಶಾ: ಇಬ್ಬರು ಮೃತ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ!

ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಯಡವಟ್ಟಿನಿಂದ ಕೆಲವು ತಿಂಗಳ ಹಿಂದೆ ನಿಧನರಾದ ಇಬ್ಬರು ಶಿಕ್ಷಕರನ್ನು ಜಗತ್ಸಿಂಗ್‌ಪುರ ಜಿಲ್ಲೆಗೆ ಬಡ್ತಿ ನೀಡಿ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲಾಗಿದೆ.

ಜಗತ್‌ಸಿಂಗ್‌ಪುರ: ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಯಡವಟ್ಟಿನಿಂದ ಕೆಲವು ತಿಂಗಳ ಹಿಂದೆ ನಿಧನರಾದ ಇಬ್ಬರು ಶಿಕ್ಷಕರನ್ನು ಜಗತ್ಸಿಂಗ್‌ಪುರ ಜಿಲ್ಲೆಗೆ ಬಡ್ತಿ ನೀಡಿ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲಾಗಿದೆ.

ಬಾಲಿಕುಡ ಬ್ಲಾಕ್ ನ ಚರಣಪುರ ಹೈಸ್ಕೂಲ್ ನ ಮನೋಜ್ ಕುಮಾರ್ ಗೊಚಾಯತ್ ಎಂಬ ಶಿಕ್ಷಕ ಆಗಸ್ಟ್ 29 ರಂದು ಕೊರೋನಾದಿಂದ ಸಾವನ್ನಪ್ಪಿದ್ದರು.  ಅವರನ್ನು ಗಯತಿ ಪುರ ಪ್ರೌಡಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಿ ಬಡ್ತಿ ನೀಡಲಾಗಿದೆ. 

ಸೆಪ್ಟಂಬರ್ 11 ರಂದು ಅವರ ಕುಟುಂಬಸ್ಥರು  ನೋಟೀಸ್ ಪಡೆದುಕೊಂಡಿದ್ದಾರೆ.  ಸೆಪ್ಟಂಬರ್ 13 ರಂದು ಶಾಲೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ಈ ವರ್ಷದ ಆರಂಭದಲ್ಲಿ ನಿಧನರಾದ ಅಲಿಪಿಂಗಲ್ ಪ್ರೌಢ ಶಾಲೆಯ ಸಹಾಯಕ ಶಿಕ್ಷಕನನ್ನು ಜಗತ್ಸಿಂಗ್‌ಪುರ ಬ್ಲಾಕ್‌ನ ಅಡಿಯಲ್ಲಿರುವ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡಲಾಗಿದೆ. ಜನವರಿ 25ರಂದು ಶಿಕ್ಷಕ ಸೌಭಾಗ್ ಚರಣ್ ಕೊರೋನಾದಿಂದ ಸಾವನ್ನಪ್ಪಿದ್ದರು.

ಅವರ ಸಾವಿನ 9 ತಿಂಗಳ ನಂತರ ಶಿಕ್ಷಣ ಇಲಾಖೆ ಹೆಡ್ ಮಾಸ್ಟರ್ ಆಗಿ ಬಡ್ತಿ ನೀಡಿದೆ.  ಇಬ್ಬರು ಶಿಕ್ಷಕರು ಸಾವನ್ನಪ್ಪು ಮುಂಚೆಯೇ ಬಡ್ತಿ ಪಟ್ಟಿ ಸಿದ್ದಪಡಿಸಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಅವರು ಅದನ್ನು ಸರಿಪಡಿಸಿರಲಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪ್ರವಿತ್ರಾ ಮಂಜರಿ ದಾಸ್ ಸ್ಪಷ್ಟ ಪಡಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT