ಅನುರಾಗ್ ಠಾಕೂರ್ 
ದೇಶ

ನೆಹರು-ಗಾಂಧಿ ಕುಟುಂಬದ ಬಗ್ಗೆ ಠಾಕೂರ್ ಹೇಳಿಕೆಗೆ ವಿರೋಧ: ಲೋಕಸಭೆಯ ಕಲಾಪ 4 ಬಾರಿ ಮುಂದೂಡಿಕೆ

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿ-ಎಂ ಕೇರ್ಸ್ ವಿಷಯದಲ್ಲಿ ನೆಹರು-ಗಾಂಧಿ ಅವರ ಕುಟುಂಬದ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದಿಂದ ಒಂದೇ ದಿನದಲ್ಲಿ ಲೋಕಸಭೆಯನ್ನು ನಾಲ್ಕು ಬಾರಿ ಮುಂದೂಡುವಂತಾಯಿತು. 

ನವದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿ-ಎಂ ಕೇರ್ಸ್ ವಿಷಯದಲ್ಲಿ ನೆಹರು-ಗಾಂಧಿ ಕುಟುಂಬದ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದಿಂದ ಒಂದೇ ದಿನದಲ್ಲಿ ಲೋಕಸಭೆ ಕಲಾಪವನ್ನು ನಾಲ್ಕು ಬಾರಿ ಮುಂದೂಡುವಂತಾಯಿತು. 
 
ತೆರಿಗೆ ಮತ್ತು ಇತರ ಕಾನೂನುಗಳ ಮಸೂದೆಯ ಮಂಡನೆ ವೇಳೆ ಅನುರಾಗ್ ಠಾಕೂರ್ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಉಲ್ಲೇಖಿಸಿ, ಈ ಟ್ರಸ್ಟ್ ನ್ನು ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಸ್ಥಾಪನೆಯಾಗಿತ್ತು. ಆದರೆ ಇದನ್ನು ಸಾರ್ವಜನಿಕ ಟ್ರಸ್ಟ್ ಎಂದು ನೋಂದಣಿ ಮಾಡದೇ ಇದ್ದರೂ ಸಹ ಎಫ್ ಸಿಆರ್ ಎ ಯೂ ಸೇರಿದಂತೆ ಅಗತ್ಯವಿದ್ದ ಎಲ್ಲಾ ಕ್ಲಿಯರೆನ್ಸ್ ಗಳೂ ದೊರೆಯಿತು. ಪಿಎಂ-ಕೇರ್ಸ್ ಫಂಡ್ ಸಾಂವಿಧಾನಿಕವಾಗಿ ಸ್ಥಾಪನೆಯಾಗಿರುವ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ನೆಹರು-ಗಾಂಧಿ ಏಕೈಕ ಕುಟುಂಬದ ಲಾಭಕ್ಕಾಗಿ ಸ್ಥಾಪನೆಯಾಗಿತ್ತು ಎಂದು ಠಾಕೂರ್ ಹೇಳಿದರು. 

ತಕ್ಷಣೆವೇ ಠಾಕೂರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತು, ಪರಿಣಾಮ ಸ್ಪೀಕರ್ ಓಂ ಬಿರ್ಲಾ ಕಪಾಲವನ್ನು ಮುಂದೂಡಿದರು. ಸಂಜೆ 6 ಕ್ಕೆ ಕಲಾಪ ಪುನಾರಂಭವಾದಾಗ, ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಠಾಕೂರ್, ನೋವುಂಟು ಮಾಡುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ. ಆದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT