ಆಯುರ್ವೇದ (ಸಂಗ್ರಹ ಚಿತ್ರ) 
ದೇಶ

ಕೋವಿಡ್-19 ಚಿಕಿತ್ಸೆಗೆ ಆಯುರ್ವೇದ ಉತ್ತಮವೇ?: ಕ್ಲಿನಿಕಲ್ ಟ್ರಯಲ್ ಗಳಿಂದ ಹೊರಬಿತ್ತು ಅಚ್ಚರಿಯ ಮಾಹಿತಿ

ಕೊರೋನಾ ಚಿಕಿತ್ಸೆ, ಕ್ಲಿನಿಕಲ್ ಟ್ರಯಲ್ ಗಳಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಅಚ್ಚರಿಯ ಹಾಗೂ ಬಹುಮುಖ್ಯವಾದ ಸಂಗತಿ ಹೊರಬಿದ್ದಿದೆ. 

ನವದೆಹಲಿ: ಕೊರೋನಾ ಚಿಕಿತ್ಸೆ, ಕ್ಲಿನಿಕಲ್ ಟ್ರಯಲ್ ಗಳಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಅಚ್ಚರಿಯ ಹಾಗೂ ಬಹುಮುಖ್ಯವಾದ ಸಂಗತಿ ಹೊರಬಿದ್ದಿದೆ. 

ಅಲೋಪತಿ ಔಷಧಗಳಿಗೆ ಹೋಲಿಕೆ ಮಾಡಿದರೆ ಮಾರಕ ಕೊರೋನಾಗೆ ಆಯುರ್ವೇದದ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ ಎನ್ನುತ್ತಿದೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿರುವ ಕ್ಲಿನಿಕಲ್ ಟ್ರಯಲ್ ಗಳು. 

ಆಯುರ್ವೇದದ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳು ಹಾಗೂ ಅಲೋಪತಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೋಲಿಕೆ ಮಾಡಿದರೆ, ನೈಸರ್ಗಿಕ ವಿಧಾನದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಬಹುತೇಕ ರೋಗಲಕ್ಷಣಗಳು ಗುಣಮುಖವಾಗಿವೆ. 

ಕೋರಿವಲ್ ಲೈಫ್ ಸೈನ್ಸಸ್ ನಿಂದ ನೀಡಲಾಗುತ್ತಿರುವ ಇಮ್ಯುನೊಫ್ರೀ ಹಾಗೂ ಬಯೋಜೆಟಿಕಾದ ರೆಜಿನ್‌ಮ್ಯೂನ್ ಎಂಬ ನ್ಯೂಟ್ರಾಸ್ಯುಟಿಕಲ್ ಚಿಕಿತ್ಸಾ ವಿಧಾನಗಳಿವೆ. ಇವು ಈ ಹಿಂದೆ ಸರ್ಕಾರಿ ಅನುಮೋದಿತ ಅಲೋಪತಿ ಚಿಕಿತ್ಸೆ ಪಡೆಯುತ್ತಿದ್ದವರಿಗಿಂತ ಹೆಚ್ಚು ರೋಗಿಗಳನ್ನು ಕೊರೋನಾದ ಬಹುತೇಕ ಗುಣಲಕ್ಷಣಗಳಿಂದ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಿದೆ ಮಧ್ಯಂತರ ಕ್ಲಿನಿಕಲ್ ಟ್ರಯಲ್ ನ ವರದಿ. 
   
ಐಎಎನ್ಎಸ್ ವರದಿ ಪ್ರಕಾರ ಸಿ ರಿಯಾಕ್ಟೀವ್ ಪ್ರೊಟೀನ್,  ಪ್ರೊಕಾಲ್ಸಿಟೋನಿನ್, ಡಿ ಡೈಮರ್ ಹಾಗೂ ಆರ್ ಟಿ-ಪಿಸಿಆರ್ ನಂತಹ ಪರೀಕ್ಷೆಗಳಲ್ಲೂ ಸಹ ಅಲೋಪತಿ ಚಿಕಿತ್ಸೆ ಪಡೆದವರಿಗಿಂತ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರುವವರು ಶೇ.20-60 ರಷ್ಟು ಉತ್ತಮ ಚೇತರಿಗೆ ಕಾಣುತ್ತಿದ್ದಾರೆ. 

ಆಯುರ್ವೇದದ ಚಿಕಿತ್ಸಾ ವಿಧಾನ ಅನುಸರಿಸುತ್ತಿರುವ ಶೇ.85 ರಷ್ಟು ಕೋವಿಡ್-19 ರೋಗಿಗಳು ಕೇವಲ 5 ದಿನಗಳಲ್ಲಿ ಕೊರೋನಾ ನೆಗೆಟೀವ್ ವರದಿ ಪದಿದ್ದರೆ, ಅದೇ 5 ದಿನಗಳಲ್ಲಿ ಅಲೋಪತಿ ಚಿಕಿತ್ಸಾ ವಿಧಾನ ಅನುಸರಿಸುತ್ತಿರುವ ಶೇ.60 ರಷ್ಟು ರೋಗಿಗಳು ನೆಗೆಟೀವ್ ವರದಿ ಪಡೆದಿದ್ದಾರೆ. ಆಯುರ್ವೇದ ಚಿಕಿತ್ಸೆಯಲ್ಲಿ 10 ದಿನಗಳಲ್ಲಿ  ಶೇ.100 ರಷ್ಟು ರೋಗಿಗಳು ಕೊರೋನಾದಿಂದ ಮುಕ್ತರಾಗಿದ್ದಾರೆ ಎಂದು ಮಧ್ಯಂತರ ವರದಿ ತಿಳಿಸಿದೆ. 
 
ದೇಶಾದ್ಯಂತ 3 ಆಸ್ಪತ್ರೆಗಳಲ್ಲಿ ಇಮ್ಯುನೊಫ್ರೀ ಮತ್ತು ರೆಜಿನ್‌ಮ್ಯೂನ್ ನ್ನು  ಔಷಧೀಯ ನಿಯಂತ್ರಿತ ಮಲ್ಟಿಸೆಂಟರ್ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಿಟಿಆರ್ ಐ ನಿಂದ ಅನುಮೋದಿನೆ ಪಡೆದಿರುವ ಈ ಕ್ಲಿನಿಕಲ್ ಟ್ರಯಲ್ ಗಳು ಸರ್ಕಾರಿ ಆಸ್ಪತ್ರೆಗಳಾದ ಆಂಧ್ರಪ್ರದೇಶದ ಶ್ರೀಕಾಕುಳಂ, ಗುಜರಾತ್ ನ ವಡೋದರದ ಪರ್ಲು ಸೇವಾಶ್ರಮ ಆಸ್ಪತ್ರೆ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿರುವ ಲೋಕಮಾನ್ಯ ಆಸ್ಪತ್ರೆಗಳಲ್ಲಿ ನಡೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT