ಪ್ರಶಾಂತ್ ಕಿಶೋರ್ 
ದೇಶ

ಮುಂದಿನ ವರ್ಷದ ಚುನಾವಣೆಗಾಗಿ ಪ್ರಶಾಂತ್ ಕಿಶೋರ್ ತಂಡ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯ ಸಾಧ್ಯತೆ

ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ  ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.

ಚಂಡೀಘಡ: ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ  ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.

ಕಿಶೋರ್ ಮತ್ತವರ ತಂಡ ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಜನರಿಂದ ಪ್ರತ್ರಿಕ್ರಿಯೆ ಪಡೆಯಲಿದ್ದು, ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಪಕ್ಷದ ಶಾಸಕರ ಪ್ರಗತಿ ಕಾರ್ಡ್ ತಯಾರಿಸುವ ನಿರೀಕ್ಷೆಯಿದೆ.

ಕೆಲ ದಿನಗಳ ಹಿಂದೆ ಕಿಶೋರ್, ಕಾಂಗ್ರೆಸ್ ಪಕ್ಷದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹಾಗೂ ಪಕ್ಷದ ಹಿರಿಯ ಶಾಸಕರನ್ನು ಭೇಟಿ ಮಾಡಿದ್ದರು. ಅಧಿಕಾರಶಾಹಿ ಸರ್ಕಾರವನ್ನು ನಡೆಸುತ್ತಿದೆ ಎಂದು ಅವರು ಕಿಶೋರ್ ಗೆ ತಿಳಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಕಿಶೋರ್  ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪ್ರತಿಕ್ರಿಯೆ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕೆಲದಿನಗಳಿಂದ ಅಷ್ಟಾಗಿ ಕಾಣಿಸಿಕೊಳ್ಳದ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಪ್ರಮುಖ ಪಾತ್ರದ ಬಗ್ಗೆಯೂ ಕಿಶೋರ್ ಗಮನ ಹರಿಸಿದ್ದಾರೆ. 

ಅಮರೀಂದರ್ ಸಿಂಗ್ ಅವರ ಫಾರಂಹೌಸ್ ನಲ್ಲಿ ಇತ್ತೀಚಿಗೆ ಕಿಶೋರ್ ಭೇಟಿಯಾಗಿದ್ದಾರೆ  ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯ ನಿವಾಸದ ಪಕ್ಕದ ಬಂಗಲೆಯಲ್ಲಿ  ಕಿಶೋರ್ ವಾಸಿಸಲಿದ್ದು, ಅವರೊಂದಿಗೆ ಸಮನ್ವಯ ಸಾಧಿಸಲು ಅಮರಿಂದರ್ ತಮ್ಮ ರಾಜಕೀಯ ಕಾರ್ಯದರ್ಶಿ ಸಂದೀಪ್ ಸಿಂಗ್ ಸಂಧು ಮತ್ತು ಅವರ ಮೊಮ್ಮಗ ನಿರ್ವಾನ್ ಸಿಂಗ್ ಅವರನ್ನು ನಿಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಎಎಸ್ ಅಧಿಕಾರಿಯೊಬ್ಬರಿಗೆ ಕಿಶೋರ್ ಅವರೊಂದಿಗೆ ಸಮನ್ವಯ ಸಾಧಿಸಲು ತಿಳಿಸಲಾಗಿದೆ. ಕಿಶೋರ್ ಮತ್ತವರ ತಂಡ 2017 ತಂಡಕ್ಕಿಂತ ದೊಡ್ಡದಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಸುಮಾರು 250 ಜನರು ಕೆಲಸ ಮಾಡಿದ್ದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT