ಸಂಸತ್ 
ದೇಶ

ರಾಜ್ಯಸಭೆಯ ಉತ್ಪಾದಕತೆ ಮೂರನೇ ವಾರದಲ್ಲಿ ಏರಿಕೆ

ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ಮೊದಲ ಎರಡು ವಾರಗಳಲ್ಲಿ ಪೋಲಾಗಿತ್ತು. 

ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ಮೊದಲ ಎರಡು ವಾರಗಳಲ್ಲಿ ಪೋಲಾಗಿತ್ತು. ಆದರೆ ಮೂರನೇ ವಾರದಲ್ಲಿ ಉತ್ಪಾದಕತೆ ಹೆಚ್ಚಿದೆ. ರಾಜ್ಯಸಭೆ ಕಲಾಪದ ಉತ್ಪಾದಕತೆ ಮೂರನೇ ವಾರದಲ್ಲಿ ಶೇ.24.2 ರಷ್ಟು ಏರಿಕೆ ಕಂಡಿದೆ. 

ರಾಜ್ಯಸಭೆ ಕಾರ್ಯದರ್ಶಿಗಳು ತಿಳಿಸಿರುವ ಮಾಹಿತಿಯ ಪ್ರಕಾರ ಮೂರನೇ ವಾರದಲ್ಲಿ 8 ಮಸೂದೆಗಳು ಅಂಗೀಕಾರಗೊಂಡಿದ್ದು. 17 ರಾಜಕೀಯ ಪಕ್ಷಗಳ 68 ರಾಜ್ಯಸಭೆ ಸದಸ್ಯರು ಈ 8 ಮಸೂದೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ

ಜು.19 ರಿಂದ ಈ ವರೆಗೂ, ಪ್ರತಿಭಟನೆಯ ಪರಿಣಾಮ 60 ಗಂಟೆಗಳ ಅವಧಿಯಲ್ಲಿ 78 ಗಂಟೆಗಳ ಅವಧಿ ಪೋಲಾಗಿದೆ. 197 ಶೂನ್ಯವೇಳೆ ಅವಧಿ ಹಾಗೂ 153 ವಿಶೇಷ ಅವಧಿಗಳು ಪೋಲಾಗಿವೆ. 

ಪೆಗಾಸಸ್ ಗೂಢಚರ್ಯೆ ಹಗರಣ ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದರ ಪರಿಣಾಮ ಅಧಿವೇಶನದ ಪ್ರಾರಂಭದಿಂದಲೂ ಸಂಸತ್ ನ ಉಭಯ ಸದನಗಳ ಕಲಾಪಗಳೂ ವ್ಯರ್ಥವಾಗುತ್ತಿದೆ. 

ಪ್ರತಿಪಕ್ಷಗಳ ನಡೆಯನ್ನು ತೀವ್ರವಾಗಿ ಟೀಕಿಸಿದ್ದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ನಡೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅವಮಾನ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT