ಸಂಸತ್ 
ದೇಶ

ರಾಜ್ಯಸಭೆಯ ಉತ್ಪಾದಕತೆ ಮೂರನೇ ವಾರದಲ್ಲಿ ಏರಿಕೆ

ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ಮೊದಲ ಎರಡು ವಾರಗಳಲ್ಲಿ ಪೋಲಾಗಿತ್ತು. 

ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ಮೊದಲ ಎರಡು ವಾರಗಳಲ್ಲಿ ಪೋಲಾಗಿತ್ತು. ಆದರೆ ಮೂರನೇ ವಾರದಲ್ಲಿ ಉತ್ಪಾದಕತೆ ಹೆಚ್ಚಿದೆ. ರಾಜ್ಯಸಭೆ ಕಲಾಪದ ಉತ್ಪಾದಕತೆ ಮೂರನೇ ವಾರದಲ್ಲಿ ಶೇ.24.2 ರಷ್ಟು ಏರಿಕೆ ಕಂಡಿದೆ. 

ರಾಜ್ಯಸಭೆ ಕಾರ್ಯದರ್ಶಿಗಳು ತಿಳಿಸಿರುವ ಮಾಹಿತಿಯ ಪ್ರಕಾರ ಮೂರನೇ ವಾರದಲ್ಲಿ 8 ಮಸೂದೆಗಳು ಅಂಗೀಕಾರಗೊಂಡಿದ್ದು. 17 ರಾಜಕೀಯ ಪಕ್ಷಗಳ 68 ರಾಜ್ಯಸಭೆ ಸದಸ್ಯರು ಈ 8 ಮಸೂದೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ

ಜು.19 ರಿಂದ ಈ ವರೆಗೂ, ಪ್ರತಿಭಟನೆಯ ಪರಿಣಾಮ 60 ಗಂಟೆಗಳ ಅವಧಿಯಲ್ಲಿ 78 ಗಂಟೆಗಳ ಅವಧಿ ಪೋಲಾಗಿದೆ. 197 ಶೂನ್ಯವೇಳೆ ಅವಧಿ ಹಾಗೂ 153 ವಿಶೇಷ ಅವಧಿಗಳು ಪೋಲಾಗಿವೆ. 

ಪೆಗಾಸಸ್ ಗೂಢಚರ್ಯೆ ಹಗರಣ ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದರ ಪರಿಣಾಮ ಅಧಿವೇಶನದ ಪ್ರಾರಂಭದಿಂದಲೂ ಸಂಸತ್ ನ ಉಭಯ ಸದನಗಳ ಕಲಾಪಗಳೂ ವ್ಯರ್ಥವಾಗುತ್ತಿದೆ. 

ಪ್ರತಿಪಕ್ಷಗಳ ನಡೆಯನ್ನು ತೀವ್ರವಾಗಿ ಟೀಕಿಸಿದ್ದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ನಡೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅವಮಾನ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT