ಸೈರಸ್ ಪೂನವಾಲಾ 
ದೇಶ

50 ವರ್ಷಗಳ ಹಿಂದೆ ಅಧಿಕಾರಿಗಳ ಕಾಲಿಗೆ ಬೀಳಬೇಕಾಗಿತ್ತು, ಮೋದಿ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ: ಪೂನವಾಲಾ

50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ...

ಪುಣೆ: 50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಅಧ್ಯಕ್ಷ ಡಾ. ಸೈರಸ್ ಪೂನವಾಲಾ ಅವರು, ಈಗ ರೆಡ್-ಟ್ಯಾಪಿಸಂ ಮತ್ತು ಲೈಸೆನ್ಸ್ ರಾಜ್ ಆಳ್ವಿಕೆ ಕಡಿಮೆಯಾಗಿದೆ ಎಂದು ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ಲೋಕಮಾನ್ಯ ತಿಲಕ್ ಟ್ರಸ್ಟ್ ನೀಡುವ ಲೋಕಮಾನ್ಯತ್ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂನವಾಲಾ ಅವರು, ಹಿಂದೆ ಅನುಮತಿ ಪಡೆಯಲು ಅಧಿಕಾರಿಗಳಿಗೆ ಮತ್ತು ಡ್ರಗ್ ಕಂಟ್ರೋಲರ್‌ಗಳ ಕಾಲಿಗೆ ಬೀಳಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ಇದರ ಪರಿಣಾಮವಾಗಿ ಎಸ್ಐಐ ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದರು.

"ನಾನು ನನ್ನ ಪ್ರೀತಿಯ ದಿವಂಗತ ಹೆಂಡತಿ ವಿಲ್ಲೂ ಜೊತೆ ಮದುವೆಯಾದ ದಿನ 1966 ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸುತ್ತೇನೆ ಎಂದರು.

ಐವತ್ತು ವರ್ಷಗಳ ಹಿಂದೆ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಅನುಮತಿ ಪಡೆಯಲು ಉದ್ಯಮವು ಹಲವು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಅಧಿಕಾರಿಗಳಿಂದ ಕಿರುಕುಳವನ್ನು ಎದುರಿಸಬೇಕಾಯಿತ ಎಂದು ಪೂನವಾಲಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT