ಮಹಾಕಾಲ ದೇವಾಲಯದಲ್ಲಿ ಬಿಜೆಪಿ ನಾಯಕರು 
ದೇಶ

ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಅರ್ಚಕರಿಗೆ ಗರ್ಭಗೃಹ ಪ್ರವೇಶಕ್ಕೆ ಅಡ್ಡಿ: ಮಹಾಕಾಲ ದೇವಾಲಯದಲ್ಲಿ ಭುಗಿಲೆದ್ದ ವಿವಾದ!

ಮಧ್ಯಪ್ರದೇಶದ ಪುರಾಣಪ್ರಸಿದ್ಧ ಮಹಾಕಾಲ ದೇವಾಲಯದಲ್ಲಿ ವಿವಾದ ಭುಗಿಲೆದ್ದಿದೆ.

ಉಜ್ಜೈನ್: ಮಧ್ಯಪ್ರದೇಶದ ಪುರಾಣಪ್ರಸಿದ್ಧ ಮಹಾಕಾಲ ದೇವಾಲಯದಲ್ಲಿ ವಿವಾದ ಭುಗಿಲೆದ್ದಿದೆ.

ವಿಶ್ವವಿಖ್ಯಾತ ದೇವಾಲಯದಲ್ಲಿ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಬಿಜೆಪಿ ನಾಯಕರ ಉಪಸ್ಥಿತಿ ಇದ್ದಾಗ ಅರ್ಚಕರಿಗೆ ಗರ್ಭಗೃಹಕ್ಕೆ ತೆರಳಲು ಬಿಡಲಿಲ್ಲ ಎಂದು ಅರ್ಚಕರು ಆರೋಪಿಸಿರುವುದು ಈ ವಿವಾದ ಭುಗಿಲೇಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ. 

ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಈ ಘಟನೆ ನಡೆದಿದ್ದು, ಬಿಜೆಪಿಯ ವಿಜಯವರ್ಗೀಯ ಹಾಗೂ ಇಬ್ಬರು ಶಾಸಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಪ್ರತಿ ದಿನ ಮುಂಜಾನೆ ಇಲ್ಲಿನ ಜ್ಯೋತಿರ್ಲಿಂಗಕ್ಕೆ ಅರ್ಚಕರ ತಂಡದಿಂದ ಭಸ್ಮ ಆರತಿ ನಡೆಯಲಿದೆ.  ಶುಕ್ರವಾರ ನಡೆದ ಈ ಪೂಜೆಯ ವೇಳೆಯಲ್ಲಿ ಬಿಜೆಪಿ ನಾಯಕರು ಇದ್ದರು. ಆದ ಕಾರಣ ತಮಗೆ ಗರ್ಭಗೃಹ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂದು ತಂಡದಲ್ಲಿದ್ದ ಅರ್ಚಕರೊಬ್ಬರು ಆರೋಪಿಸಿದ್ದಾರೆ. 

"ಬಿಜೆಪಿ ನಾಯಕರಿದ್ದ ಕಾರಣ ಪ್ರವೇಶ ನಿರಾಕರಿಸಲಾಗುತ್ತದೆ ಎಂಬುದಾದರೆ ದೇವಾಲಯದ ಆಡಳಿತ ನಮಗೇಕೆ ಪಾಸ್ ನೀಡಿತ್ತು? ಹಾಗಿದ್ದರೆ ಪಾಸ್ ನ್ನು ಎಸೆಯುವುದು ಒಳ್ಳೆಯದು ಅಲ್ಲವೇ? ಈ ಕಾರಣದಿಂದಾಗಿ ಗರ್ಭಗೃಹ ಪ್ರವೇಶಿಸದಂತೆ ಅರ್ಧಗಂಟೆ ನನ್ನನ್ನು ತಡೆಯಲಾಗಿತ್ತು" ಎಂದು ಅರ್ಚಕ ಅಜಯ್ ಗುರು ಹೇಳಿದ್ದಾರೆ. 

ಗರ್ಭಗೃಹ ಪ್ರವೇಶಿಸುವುದಕ್ಕೆ ಅನುಮತಿ ನೀಡದೇ ಇದ್ದದ್ದನ್ನು ವಿರೋಧಿಸಿ ಅರ್ಚಕರು ಕೂಗಾಡುತ್ತಿದ್ದ ದೃಶ್ಯಗಳು ಹಾಗೂ ಪ್ರವೇಶ ನಿರ್ಬಂಧಿಸಿದ್ದಲ್ಲಿ ನಿಂತಿದ್ದ ದೃಶ್ಯಗಳು ವೈರಲ್ ಆಗತೊಡಗಿವೆ. ಈ ಘಟನೆಯನ್ನು ಉಜ್ಜೈನ್ ಜಿಲ್ಲಾ ಕಲೆಕ್ಟರ್ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಅರ್ಚಕ ಅಜಯ್ ಗುರು ಎಚ್ಚರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT