ಕಾಲ್ಪನಿಕ ಚಿತ್ರ 
ದೇಶ

ಪತ್ನಿ ವಿಯೋಗ ತಾಳಲಾರದೆ ಆಕೆಯ ಚಿತೆಗೆ ಹಾರಿ ಪತಿ ಆತ್ಮಹತ್ಯೆ

ಪತ್ನಿಯ ಶವ ಸಂಸ್ಕಾರ ವೇಳೆ ನೀಲಮಣಿ, ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು. ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು.

ಭುವನೇಶ್ವರ: ಪತ್ನಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವೃದ್ಧ ವ್ಯಕ್ತಿಯೋರ್ವ ಉರಿಯುತ್ತಿದ್ದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಸಿಯಾಲ್ಜೋಡಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಮೃತ ವೃದ್ಧ ನೀಲಮಣಿಗೆ 65 ವರ್ಷ ವಯಸ್ಸಾಗಿತ್ತು ಎಂಡು ತಿಳಿದುಬಂದಿದೆ. 

ನೀಲಮಣಿ ಪತ್ನಿ ರಾಯ್ಬರಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರ ವೇಳೆ ನೀಲಮಣಿ ಪತ್ನಿ ವಿಯೋಗ ತಾಳಲಾರದೆ ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು.

ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು. ಈ ಸಂದರ್ಭ ನೀಲಮಣಿ ಚಿತೆಯೊಳಗೆ ಹಾರಿದ್ದಾಗಿ ತಿಳಿದುಬಂದಿದೆ. 

ಸದ್ದು ಕೇಳಿ ಕುಟುಂಬಸ್ಥರು ಓಡಿ ಬರುವ ವೇಳೆಗೆ ನೀಲಮಣಿ ದೇಹ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿತ್ತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ನಡೆದ ಸ್ಥಳಕ್ಕೆ ಅಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT