ಕೋವಿಡ್-19 ಲಸಿಕೆ 
ದೇಶ

ಮೊದಲು 2 ಡೋಸ್ ಲಸಿಕೆ ಗುರಿಗೆ ಆದ್ಯತೆ ನೀಡಿ: ಬೂಸ್ಟರ್ ಡೋಸ್ ಗೆ ಒತ್ತಾಯದ ನಡುವೆ ತಜ್ಞರ ಸಲಹೆ

ಭಾರತದಲ್ಲಿ ಇನ್ನೂ ಹಲವು ಮಂದಿಗೆ ಕೋವಿಡ್-19 ವಿರುದ್ಧದ ಪ್ರಾಥಮಿಕ ಹಂತದ ರಕ್ಷಣೆ ನೀಡುವ 2 ನೇ ಡೋಸ್ ಲಸಿಕೆ ಸಿಕ್ಕಿಲ್ಲ ಆದ್ದರಿಂದ ಅರ್ಹ ವ್ಯಕ್ತಿಗಳಿಗೆ 2 ನೇ ಡೋಸ್ ಲಸಿಕೆಯನ್ನು ನೀಡುವತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ. 

ನವದೆಹಲಿ: ಭಾರತದಲ್ಲಿ ಇನ್ನೂ ಹಲವು ಮಂದಿಗೆ ಕೋವಿಡ್-19 ವಿರುದ್ಧದ ಪ್ರಾಥಮಿಕ ಹಂತದ ರಕ್ಷಣೆ ನೀಡುವ 2 ನೇ ಡೋಸ್ ಲಸಿಕೆ ಸಿಕ್ಕಿಲ್ಲ ಆದ್ದರಿಂದ ಅರ್ಹ ವ್ಯಕ್ತಿಗಳಿಗೆ 2 ನೇ ಡೋಸ್ ಲಸಿಕೆಯನ್ನು ನೀಡುವತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ. 

ಜಗತ್ತಿನಾದ್ಯಂತ ಕೊರೋನಾ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಪತ್ತೆಯಾಗಿದ್ದು, ಭಾರತದಲ್ಲೂ ಸೋಂಕು ಪೀಡಿತರಿರುವುದು ದೃಢಪಟ್ಟಿರುವುದರಿಂದ ಬೂಸ್ಟರ್ ಡೋಸ್ ಲಸಿಕೆ ನೀಡುವುದಕ್ಕೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರು, ಬೂಸ್ಟರ್ ಡೋಸ್ ಗಿಂತಲೂ ಮುನ್ನ  ಮೊದಲು 2 ಡೋಸ್ ಲಸಿಕೆ ಗುರಿ ತಲುಪುವುದಕ್ಕೆ ಆದ್ಯತೆ ನೀಡಬೇಕೆಂದು ಹೇಳುತ್ತಿದ್ದಾರೆ. 

ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ಗಳನ್ನು ನೀಡುವುದನ್ನು ಪ್ರಾರಂಭಿಸಲಾಗಿದೆ. ಆದರೆ ಭಾರತದಲ್ಲಿ ಆದ್ಯತೆ ಬೇರೆಯದ್ದಾಗಿರಬೇಕಾಗಿದೆ ಎಂದು ತಜ್ಞರು ಹೇಳಿದ್ದು, ಬೃಹತ್ ಪ್ರಮಾಣದಲ್ಲಿನ ಲಸಿಕೆ ಅಭಿಯಾನ ಪ್ರಾರಂಭವಾಗಿ ಇನ್ನೂ 6-8 ತಿಂಗಳಷ್ಟೇ ಕಳೆದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

40 ವರ್ಷಗಳ ಮೇಲ್ಪಟ್ಟ ವಯಸ್ಸಿನ ಹೆಚ್ಚು ಅಪಾಯ ಎದುರಿಸುತ್ತಿರುವ ಹಾಗೂ ಕೋವಿಡ್-19 ಸೋಂಕು ಹರಡುವ ವಾತಾವರಣಕ್ಕೆ ತೆರೆದುಕೊಳ್ಳುವ ಜನಸಂಖ್ಯೆಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಭಾರತದ SARS-CoV-2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಮ್ ಶಿಫಾರಸು ಮಾಡಿದ್ದು, ತಜ್ಞರ ಅಭಿಪ್ರಾಯ ಇದಕ್ಕೆ ಬೇರೆಯದ್ದಾಗಿಯೇ ಇದೆ. 

ನಮ್ಮ ದೇಶದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಂದಿ ಇದ್ದು, ಅವರಿಗೆ ಲಸಿಕೆ ನೀಡಿ, ಎರಡನೇ ಡೋಸ್ ನ್ನು ಪೂರ್ಣಗೊಳಿಸುವವರೆಗೂ, ಮೂರನೇ ಡೋಸ್ ಲಸಿಕೆಯನ್ನು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ಇಮ್ಯುನಾಲಜಿಸ್ಟ್ ವಿನೀತಾ ಬಲ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Demographic manipulation: ಒಳನುಸುಳುವಿಕೆಗಿಂತ ಸಾಮಾಜಿಕ ಸಾಮರಸ್ಯಕ್ಕೆ ಇದೇ 'ದೊಡ್ಡ ಅಪಾಯ'- ಪ್ರಧಾನಿ ಮೋದಿ

RSS Centenary: ಇದೇ ಮೊದಲು; 'ಭಾರತ ಮಾತೆ'ಯ ಚಿತ್ರವುಳ್ಳ 100 ನಾಣ್ಯ ರೂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮೈಸೂರು: ಮುಂದಿನ ವರ್ಷಗಳಲ್ಲೂ ದಸರಾದಲ್ಲಿ ನಾನೇ ಪುಷ್ಪಾರ್ಚನೆ: ಡಿಕೆಶಿ ಕನಸಿಗೆ 'ಕೊಳ್ಳಿ' ಇಟ್ರಾ ಸಿದ್ದರಾಮಯ್ಯ?

DA hike: ಕೇಂದ್ರ ಸರ್ಕಾರಿ ನೌಕರರಿಗೆ 'ದಸರಾ ಗಿಫ್ಟ್' ; ಶೇ. 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಪುಟ ಅನುಮೋದನೆ

ತಮಿಳುನಾಡು: ಅರುಣಾಚಲೇಶ್ವರ ದೇವಸ್ಥಾನಕ್ಕೆ ಬಂದಿದ್ದ ಆಂಧ್ರ ಮಹಿಳೆ ಮೇಲೆ ಅತ್ಯಾಚಾರ; ಇಬ್ಬರು ಪೊಲೀಸರ ಬಂಧನ!

SCROLL FOR NEXT