ಸಾಂದರ್ಭಿಕ ಚಿತ್ರ 
ದೇಶ

ಒಪ್ಪಿಗೆಯಿಲ್ಲದವನ ಜೊತೆ ಮದುವೆ: ಮಗನ ಸಹಾಯ ಪಡೆದು ಮಗಳ ತಲೆಯನ್ನೇ ಕತ್ತರಿಸಿದ ತಾಯಿ!

ಮನೆಯವರ ಒಪ್ಪಿಗೆಯಿಲ್ಲದೆ ವ್ಯಕ್ತಿಯನ್ನು ಮದುವೆಯಾದ ಯುವತಿಯ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸೋದರ ತಾಯಿಯ ಸಹಾಯದಿಂದಲೇ ಹತ್ಯೆ ಮಾಡಿದ್ದಾನೆ. 

ಮುಂಬೈ: ಮನೆಯವರ ಒಪ್ಪಿಗೆಯಿಲ್ಲದೆ ವ್ಯಕ್ತಿಯನ್ನು ಮದುವೆಯಾದ ಯುವತಿಯ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸೋದರ ತಾಯಿಯ ಸಹಾಯದಿಂದಲೇ ಹತ್ಯೆ ಮಾಡಿದ್ದಾನೆ. 

ಮಗ ಮದುವೆಯಾಗಿ ಹೋದ ಗಂಡನ ಮನೆಯಲ್ಲಿಯೇ ನಿನ್ನೆ ಈ ಭೀಕರ ಕೃತ್ಯ ನಡೆಸಿದ್ದಲ್ಲದೆ, ಕೊಲೆ ಮಾಡಿದ ನಂತರ ಯುವತಿಯ ಸೋದರ ಮತ್ತು ತಾಯಿ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುತ್ತಮುತ್ತಲಿದ್ದವರಿಗೆ ತೋರಿಸಿ ಅದರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಆರೋಪಿ ತಾಯಿಯನ್ನು 38 ವರ್ಷದ ಶೋಭಾ ಸಂಜಯ್ ಮೊಟೆ ಮತ್ತು ಆಕೆಯ ಪುತ್ರ 18 ವರ್ಷದ ಸಂಕೇತ್ ಸಂಜಯ್ ಮೊಟೆ ಎಂದು ಗುರುತಿಸಲಾಗಿದ್ದು 19 ವರ್ಷದ ಮಗಳು ತಮ್ಮ ಒಪ್ಪಿಗೆಯಿಲ್ಲದವನ ಜೊತೆ ಮದುವೆಯಾಗುತ್ತಿರುವುದಕ್ಕೆ ಈ ರಾಕ್ಷಸಿ ಕೃತ್ಯವೆಸಗಿದ್ದಾರೆ.

ಯುವತಿ ಗಂಡನ ಮನೆಯಲ್ಲಿ ಚಹಾ ತಯಾರಿಸುತ್ತಿದ್ದಳು. ನಿನ್ನೆ ತಾಯಿ-ಮಗ ಲಡ್ಗೌನ್ ನಲ್ಲಿರುವ ಆಕೆಯ ಮನೆಗೆ ಏಕಾಏಕಿ ಹೋಗಿ ತಾಯಿ ಕಾಲನ್ನು ಹಿಡಿದರೆ ಸೋದರೆ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ತಂದಿದ್ದ ಕತ್ತಿಯಿಂದ ಕುತ್ತಿಗೆ ಕತ್ತರಿಸಿಯೇ ಬಿಟ್ಟರು. ಕಡಿದ ಶಿರವನ್ನು ಹಿಡಿದು ಊರವರಿಗೆಲ್ಲಾ ತೋರಿಸುತ್ತಾ ಕೊನೆಗೆ ವಿರ್ಗೌನ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು.

ಇದೊಂದು ಪೂರ್ವಸಂಚಿನ ಕೊಲೆಯಾಗಿದ್ದು ಇದಕ್ಕೂ ಮೊದಲೇ ಒಂದೆರಡು ಬಾರಿ ತಾಯಿ-ಮಗ ಹೋಗಿ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ್ದರು. ಪತ್ನಿಯನ್ನು ಕೊಲೆ ಮಾಡುತ್ತಿದ್ದಾಗ ಅರಚುವುದು ಕೇಳಿ ಪತಿ ಕೂಡಲೇ ಧಾವಿಸಿ ತಡೆಯಲು ಮುಂದಾದಾಗ ಮಗ ಆತನನ್ನು ಸಹ ಕತ್ತಿಯಲ್ಲಿ ಹಲ್ಲೆ ಮಾಡಲು ಮುಂದಾದ. ಆಗ ಆತ ತಪ್ಪಿಸಿಕೊಂಡನು. 

ತಮಗೆ ಒಪ್ಪಿಗೆಯಿಲ್ಲದವನ ಜೊತೆ ಮಗಳು ಮದುವೆ ಮಾಡಿಕೊಂಡು ಸಮಾಜದಲ್ಲಿ ತಾವು ತಲೆತಗ್ಗಿಸುವಂತೆ ಮಾಡಿದ್ದಾಳೆ ಎಂದು ತಾಯಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT