ತಿರಥ್ ಸಿಂಗ್ ರಾವತ್ 
ದೇಶ

ಉತ್ತರಾಖಂಡ್ ಸಿಎಂ ತೀರ್ಥ ಸಿಂಗ್ ರಾವತ್ ದೆಹಲಿಗೆ ಭೇಟಿ; ಮತ್ತೆ ನಾಯಕ್ವ ಬದಲಾವಣೆಯ ಬಗ್ಗೆ ಚರ್ಚೆ?

ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ. 

ನವದೆಹಲಿ: ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ. 

ನವದೆಹಲಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪೂರ್ವನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ನವದೆಹಲಿಯಲ್ಲಿ ತೀರ್ಥ ಸಿಂಗ್ ರಾವತ್ ಅವರು ಅಮಿತ್ ಶಾ ಹಾಗೂ ಅನಿಲ್ ಬಲುನಿ ಅವರನ್ನು ಭೇಟಿ ಮಾಡಲಿದ್ದಾರೆ. 

" ಉಪಚುನಾವಣೆಗಳ ಬಗ್ಗೆ ಚರ್ಚಿಸಲು ಕೇಂದ್ರ ನಾಯಕರು ಮುಖ್ಯಮಂತ್ರಿಗಳಿಗೆ ಬುಲಾವ್ ಕಳಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕುಂಭ ಮೇಳದಲ್ಲಿ ನಕಲಿ ಟೆಸ್ಟಿಂಗ್ ಹಗರಣ ನಾಯಕತ್ವದ ಬದಲಾವಣೆ ಚರ್ಚೆ ಬಲವಾಗಲು ಇರುವ ಕಾರಣಗಳಲ್ಲಿ ಒಂದು" ಎಂದು ಪಕ್ಷದ ಮೂಲಗಳು ತಿಳಿಸಿವೆ. 

ವಿಧಾನಸಭೆಯ ನಿಯಮಗಳ ಪ್ರಕಾರ ರಾವತ್ ಅವರು ಸೆಪ್ಟೆಂಬರ್ 10 ರ ಒಳಗೆ ಆಯ್ಕೆಯಾಗಬೇಕಾಗುತ್ತದೆ. ಪೌರಿ ಕ್ಷೇತ್ರದ ಸಂಸದರಾಗಿರುವರಾವತ್ ಮಾ.10 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

ಪಕ್ಷದಲ್ಲಿರುವ ಹಲವರಿಗೆ ಇದು, ದೇಜಾ ವು ಪರಿಸ್ಥಿತಿ (ಇದೇ ಪರಿಸ್ಥಿತಿಯನ್ನು ಹಿಂದಿಮ್ಮೆ ಕಂಡಿದ್ದು) ಯಾಗಿದೆ. ಮಾರ್ಚ್ ನಲ್ಲಿ ಅಂದಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಕೇಂದ್ರ ನಾಯಕರು ಕರೆಸಿ ಮಾತನಾಡಿದ್ದರ ಬಳಿಕ ಸಿಎಂ ಬದಲಾವಣೆಯಾಗಿ ಈಗಿರುವ ತೀರ್ಥ ಸಿಂಗ್ ರಾವತ್ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗಿತ್ತು.  

ಅಚ್ಚರಿಯ ಬೆಳವಣಿಗೆಯಲ್ಲಿ ಈಗಲೂ ಕೇಂದ್ರ ನಾಯಕರು ಏಕಾ ಏಕಿ ಸಿಎಂ ತೀರ್ಥ ಸಿಂಗ್ ರಾವತ್ ಅವರನ್ನು ಕರೆಸಿ ಮಾತನಾಡಿದ್ದಾರೆ. ಮಂಗಳವಾರದಂದು ಪಕ್ಷದಲ್ಲಿ ಮೂರು ದಿನಗಳ ಚಿಂತನ್ ಶಿಬಿರ ಮುಕ್ತಾಯಗೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗಳ ಬಗ್ಗೆ ಚರ್ಚಿಸಲಾಗಿದೆ. 

ಹೊಸ ಮುಖ್ಯಮಂತ್ರಿಗಳ ನೇಮಕವಾದಾಗ ಮಾರ್ಚ್ 2022 ರ ಬದಲು 2021 ರ ಆಗಸ್ಟ್ ನಲ್ಲಿಯೇ ಉತ್ತರಾಖಂಡ್ ರಾಜ್ಯ ಚುನಾವಣೆಯೂ ನಡೆಯಲಿದೆ ಎಂಬ ಊಹಾಪೋಹಗಳೂ ಉಂಟಾಗಿತ್ತು. ಆದರೆ ಆ ಬಳಿಕ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಇಲ್ಲ ಎಂದು ಪಕ್ಷದ ನಾಯಕರು ಸ್ಪಷ್ಟನೆ ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT