ಮೃತ ಮೀನುಗಾರರು 
ದೇಶ

ಕಾಸರಗೋಡು ದೋಣಿ ದುರಂತ: ನಾಪತ್ತೆಯಾದ ಮೂವರು ಮೀನುಗಾರರು ಶವವಾಗಿ ಪತ್ತೆ

ಜುಲೈ 4 ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಮೂವರ ಮೃತದೇಹಗಳು ಇಂದು (ಸೋಮವಾರ) ಕಾಸರಗೋಡು ಬೇಕಲ್ ಕೋಟಿಕುಳಂ ಕಡಲತೀರದಲ್ಲಿ ಪತ್ತೆಯಾಗಿವೆ.

ಕಾಸರಗೋಡು: ಜುಲೈ 4 ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಮೂವರ ಮೃತದೇಹಗಳು ಇಂದು (ಸೋಮವಾರ) ಕಾಸರಗೋಡು ಬೇಕಲ್ ಕೋಟಿಕುಳಂ ಕಡಲತೀರದಲ್ಲಿ ಪತ್ತೆಯಾಗಿವೆ.

ಮೃತರನ್ನು ಕಸಬಾ ಬೀಚ್‌ನ ನಿವಾಸಿಗಳಾದ ಸಂದೀಪ್ (34), ರತೀಶ್ (35), ಮತ್ತು ಕಾರ್ತಿಕ್ (22) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಏಳು ಜನರಿದ್ದ ಆಂಜನೇಯ ಹೆಸರಿನ ಫೈವರ್ ದೋಣಿ ಮೀನುಗಾರಿಕೆಗೆ ತೆರಳಿದ್ದಾಗ ಕಿಯೂರು ಸಮೀಪದಲ್ಲಿ ದೋಣಿ ಅಲೆಗೆ ಸಿಕ್ಕು ಮಗುಚಿ ದುರಂತ ಸಭವಿಸಿತ್ತು. ಆ ವೇಳೆ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ದುರಂತಕ್ಕೀಡಾದ ದೀಣಿಯಲ್ಲಿನ ನಾಲ್ವರನ್ನು ರಕ್ಷಿಸಿದ್ದರು.

ಅಡ್ಯತ್ತಬೈಲ್ಬೀಚ್ ನಿವಾಸಿ ಬಿ.ಮಣಿಕುಟ್ಟನ್ (36), ಕೋಟಿಕುಳಂ ಕಡಪ್ಪುರದ ರವಿ(22), ನೆಲ್ಲಿಕುಂಜೆ ನಿವಾಸಿ ಶಶಿ (35) ಮತ್ತು ಕಸಾಬಾ ನಿವಾಸಿ ಶಿಬಿನ್ (23) ಅಬರನ್ನು ರಕ್ಷಿಸಲಾಗಿತ್ತು.

ಸ್ಥಳೀಯ ಮೀನುಗಾರರು, ಕರಾವಳಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭಾನುವಾರ ತಡರಾತ್ರಿಯವರೆಗೆ ನಾಪತ್ತೆಯಾದವರಿಗಾಗಿ ಶೋಧ ಮುಂದುವರಿಸಿದ್ದರು. ತೀರಕ್ಕೆ ಬಂದಿದ್ದ ಮೂವರ ಮೃತದೇಹವನ್ನು  ಮೀನುಗಾರರು ಗಮನಿಸಿದರು, ಅವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT