ರವಿಶಂಕರ್ ಪ್ರಸಾದ್ ಹಾಗೂ ಜವಡೇಕರ್ (ಸಂಗ್ರಹ ಚಿತ್ರ) 
ದೇಶ

ಕೇಂದ್ರದ 12 ಸಚಿವರಿಗೆ ಕೊಕ್ ಕೊಟ್ಟಿದ್ದೇಕೆ?

ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ 12 ಸಚಿವರು ಸ್ಥಾನ ಕಳೆದುಕೊಂಡಿದ್ದಾರೆ. ಕೋವಿಡ್-19 ಅಲೆಯ ಅಬ್ಬರದಲ್ಲಿ ಬಹುಶಃ ಬಿಜೆಪಿಯೊಳಗೆ 'ಬ್ರಾಂಡ್ ಮೋದಿ' ಇಮೇಜ್ ಕುಗ್ಗಲು ಕಾರಣರಾಗಿದ್ದಾರೆ ಎನ್ನಲಾದ ಈ ಸಚಿವರು ಅದಕ್ಕೆ ಬೆಲೆ ತೆತ್ತಿದ್ದಾರೆ ಎನ್ನಲಾಗಿದೆ.

ನವದೆಹಲಿ: ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ 12 ಸಚಿವರು ಸ್ಥಾನ ಕಳೆದುಕೊಂಡಿದ್ದಾರೆ. ಕೋವಿಡ್-19 ಅಲೆಯ ಅಬ್ಬರದಲ್ಲಿ ಬಹುಶಃ ಬಿಜೆಪಿಯೊಳಗೆ 'ಬ್ರಾಂಡ್ ಮೋದಿ' ಇಮೇಜ್ ಕುಗ್ಗಲು ಕಾರಣರಾಗಿದ್ದಾರೆ ಎನ್ನಲಾದ ಈ ಸಚಿವರು ಅದಕ್ಕೆ ಬೆಲೆ ತೆತ್ತಿದ್ದಾರೆ ಎನ್ನಲಾಗಿದೆ.

ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಸ್ಥಾನ ಕಳೆದುಕೊಂಡವರಲ್ಲಿ ಪ್ರಮುಖರು. ಕೊರೋನಾ 2ನೇ ಅಲೆ ವೇಳೆ ಇವರ ಕಾರ್ಯಕ್ಷಮತೆಯಲ್ಲಿನ ವೈಫಲ್ಯದ ಕಾರಣಕ್ಕೆ ಇವರನ್ನು ಪದಚ್ಯುತಗೊಳಿಸಲಾಗಿದೆ ಎಂಬ ವಿಶ್ಲೇಷಣೆಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಮಹಾರಾಷ್ಟ್ರ, ಕೇರಳ ಹಾಗೂ ಇತರ ಕೆಲ ರಾಜ್ಯಗಳು ಸಾಂಕ್ರಾಮಿ ರೋಗದ ಕಪಿಮುಷ್ಟಿಯಲ್ಲಿ ಸಿಲುಕಿರುವ ನಡುವೆಯೇ 'ಸಾಂಕ್ರಾಮಿಕದ ವಿರುದ್ಧದ ಜಯ'ಕ್ಕಾಗಿ ಬಿಜೆಪಿ ಮುಖಂಡರು ಪ್ರಧಾನಿಯವರ ಸಮರ್ಥ ನಾಯಕತ್ವದ ಗುಣಗಾನ ಮಾಡುತ್ತಿದ್ದರು. ಆದರೆ ಕೊರೋನಾ ಎರಡನೇ ಅಲೆಯನ್ನು ಸಮರ್ಪಕವಾಗಿ ಅಂದಾಜಿಸದ ಕಾರಣಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ಬೆಲೆ ತೆತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯದಲ್ಲಿ ಹಲವು ಮುಜುಗರಗಳನ್ನು ಎದುರಿಸಲು ಕಾರಣರಾದ ಕಾನೂನು ಮತ್ತು ನ್ಯಾಯಾಂಗ ಖಾತೆ ಸಚಿವ ರವಿಶಂಕರ ಪ್ರಸಾದ್ (66) ಕೂಡಾ ಬೆಲೆ ತೆರಬೇಕಾಯಿತು.

ಜನರು ಆಸ್ಪತ್ರೆ ಬೆಡ್ ಪಡೆಯಲು ಹೆಣಗುವ ಮಧ್ಯೆಯೇ ತನ್ನ ಲಸಿಕೆ ಖರೀದಿ ನೀತಿ ಮತ್ತು ಆಮ್ಲಜನಕ ನಿರ್ವಹಣೆ ನಿಲುವಿನ ಬಗ್ಗೆ ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಹರಸಾಹಸ ಮಾಡುತ್ತಿತ್ತು. ಇದರಿಂದಾಗಿ ಜನಸಾಮಾನ್ಯರು, ಕೋವಿಡ್-19 ಎರಡನೇ ಅಲೆ ನಿಯಂತ್ರಣದ ವೈಫಲ್ಯವನ್ನು ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೊರಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಲು ಕಾರಣವಾಗಿತ್ತು ಎಂದು ಬಿಜೆಪಿ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

ಇನ್ನು ಸರ್ಕಾರದ ವಕ್ತಾರನ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಲು ವಿಫಲವಾದದ್ದು ಜಾವಡೇಕರ್ (70) ಅವರ ತಲೆದಂಡಕ್ಕೆ ಕಾರಣ ಎನ್ನಲಾಗಿದೆ.

ರಮೇಶ್ ಪೋಖ್ರಿಯಾಲ್ ಇನ್ನಷ್ಟು ಕ್ರಿಯಾಶೀಲರಾಗಿರಬೇಕಿತ್ತು ಎಂಬ ಕಾರಣಕ್ಕೆ ಹುದ್ದೆ ಕಳೆದುಕೊಂಡಿದ್ದರೆ, ಡಿ.ವಿ.ಸದಾನಂದ ಗೌಡ ಇದೇ ಕಾರಣಕ್ಕೆ ಮೋದಿಯವರ ಮೊದಲ ಅವಧಿಯಲ್ಲೇ ರೈಲ್ವೆ ಖಾತೆಯನ್ನು ಕಳೆದುಕೊಂಡವರು. ಸಂತೋಷ್ ಗಂಗ್ವಾರ್, ಬಾಬುಲ್ ಸುಪ್ರಿಯೊ, ಸಂಜಯ್ ಧೋತ್ರೆ, ರತನ್‌ಲಾಲ್ ಕಟಾರಿಯಾ, ಪ್ರತಾಪ್‌ಚಂದ್ರ ಸಾರಂಗಿ, ರೇಬಶ್ರೀ ಚೌಧರಿ ತಮ್ಮ ಹುದ್ದೆಗಳನ್ನು ಕಳೆದುಕೊಂಡಿರುವ ರಾಜ್ಯ ಸಚಿವರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT