ನಿತೀಶ್ ಕುಮಾರ್ 
ದೇಶ

ಎಲ್‌ಜೆಪಿಯ ಪಾರಸ್ ಗಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಒಂದೇ ಕಲ್ಲಿಂದ ಎರಡು ಹಕ್ಕಿ ಕೊಂದ ಜೆಡಿ-ಯು!

 ಬಿಹಾರ ಸಿಎಂ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರ ಹೊಸ ರಾಜಕೀಯ ಜೀವನ ಕೊನೆಗೊಳಿಸಲು ಲು ಜೆಡಿ-ಯು ಕೋಟಾದ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡುತ್ತದೆಯೆ?

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಅವರ ಹೊಸ ರಾಜಕೀಯ ಜೀವನ ಕೊನೆಗೊಳಿಸಲು  ಜೆಡಿ-ಯು ಕೋಟಾದ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರೆ? ರಾಜಕೀಯ ತಜ್ಞರ ಪ್ರಕಾರ, ಎಲ್‌ಜೆಪಿ ಕೋಟಾದಿಂದ ಚಿರಾಗ್ ಪಾಸ್ವಾನ್ ಪ್ರವೇಶವನ್ನು ತಡೆಯುವ ಸಲುವಾಗಿ ಜೆಜೆ-ಯು ಎಲ್‌ಜೆಪಿಯ ಎದುರಾಳಿ ಗುಂಪಿನ ಪಶುಪತಿ ಕುಮಾರ್ ಪಾರಸ್ ಗೆಅವಕಾಶ ಕಲ್ಪಿಸುವ ಸಲುವಾಗಿ ಎರಡನೇ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದೆ

ವಾಸ್ತವವಾಗಿ, ಜೆಡಿ-ಯು ತ್ಯಾಗದಿಂದ ಮಾತ್ರ ಕೇಂದ್ರ ಸಂಪುಟದಲ್ಲಿ  ಪಾರಸ್ ಸೇರ್ಪಡೆ  ಸಾಧ್ಯ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಪಾರಸ್ ಅವರನ್ನು ದೆಹಲಿಗೆ ತಲುಪಿಸಲು ನಿತೀಶ್ ದೊಡ್ಡ ಪಾತ್ರ ವಹಿಸಿದ್ದರು. ಚಿರಾಗ್ ಅವರು ಪ್ರಧಾನ ಮಂತ್ರಿಯ ಸಾಮಾನ್ಯ ಆಯ್ಕೆಯಾಗಿರಬೇಕಾಗಿತ್ತು, ಏಕೆಂದರೆ ಅವರನ್ನು ಮೋದಿಯವರ ಆಪ್ತ  ಎಂದು ಪರಿಗಣಿಸಲಾಗಿದೆ. 

ಆದರೆ ಎಲ್‌ಜೆಪಿಯಲ್ಲಿನ ಭಿನ್ನಮತ, ವಿಭಜನೆಯಿಂದಾಗಿ ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಜೆಡಿ-ಯು ವಿರುದ್ಧ ರಾಜಕೀಯ ಆಡಿದ ಚಿರಾಗ್‌ಗೆ ‘ಪಾಠ ಕಲಿಸಲು’ ಜೆಡಿ-ಯು ನಿರ್ಧರಿಸಿದೆ. ಎರಡನೇ ಮಂತ್ರಿಸ್ಥಾನದ ತ್ಯಾಗದ ಮೂಲಕ, ಜೆಡಿ-ಯು ಎರಡು ಹಕ್ಕಿಗಳನ್ನು ಒಂದೇ ಕಲ್ಲಿನಿಂದ ಹೊಡೆದಿದೆ. ಚಿರಾಗ್‌ನನ್ನು ಎನ್‌ಡಿಎ ನಿಂದ ದೂರ ಮಾಡುವಲ್ಲಿ ಮತ್ತು ಬಿಜೆಪಿಯ ಪಾಸ್ವಾನ್ ಬೆಂಬಲಿತ ಮತಗಳಿಗೆ ಹಾನಿ ಮಾಡುವಲ್ಲಿ ಯಶಸ್ವಿಯಾಗಿದೆ.

"ಜೆಡಿ-ಯುಗೆ ಕೇವಲ ಒಂದು ಮಂತ್ರಿ ಸ್ಥಾನ ಮಾತ್ರ ಸಿಕ್ಕಿರಬಹುದು ಎಂದು ಕಂಡರೂ ಇದು ಚಿರಾಗ್ ಮತ್ತು ಬಿಜೆಪಿ ಎರಡರ ವಿರುದ್ಧ ರಾಜಕೀಯ ಆಟದಲ್ಲಿ  ಯಶಸ್ವಿಯಾಗಿದೆ. ಈಗ, ಪಾಸ್ವಾನ್ ಸಮುದಾಯದಲ್ಲಿ ಬಿಜೆಪಿ ಚಿರಾಗ್ ಅವರನ್ನು ಬಳಸಿ ಎಸೆದಿದೆ ಎಂಬ ಬಲವಾದ ಸಂದೇಶ ರವಾನೆಯಾಗಿದೆ” ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ,

ರಾಜಕೀಯವು ಬಿಹಾರದಲ್ಲಿ ಅಭೂತಪೂರ್ವ ತಿರುವು ಪಡೆಯುತ್ತದೆ, ಈಗ ಚಿರಾಗ್ ಯಾವ ಮಾರ್ಗದಲ್ಲಿ ಮುಂದುವರಿಯುತ್ತಾರೆ . ಚಿರಾಗ್ ಮಹಾ ಘಟಬಂಧನ್  ಸೇರ್ಪಡೆಗೊಳ್ಳಲಿದ್ದಾರೆ ಎಂದು ಊಹಿಸಲಾಗಿದೆ. ಇದು ಪೂರ್ವ ರಾಜ್ಯದಲ್ಲಿ ಬಿಜೆಪಿಗೆ ಹಾನಿಯುಂಟು ಮಾಡಲಿದೆ ಎಂದು ವೀಕ್ಷಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT