ದೇಶ

ಶತಮಾನಗಳ ಕಾಲ ನಿರ್ಮಿಸಿದ ದೇಶವನ್ನು ಸೆಕೆಂಡುಗಳಲ್ಲಿ ಅಳಿಸಿ ಸಂಕಷ್ಟಕ್ಕೆ ತಂದಿದ್ದಾರೆ: ರಾಹುಲ್ ಗಾಂಧಿ

Shilpa D

ನವದೆಹಲಿ: ದೇಶಕ್ಕೆ ಕಷ್ಟದ ಸಮಯವನ್ನು ಯಾರು ತಂದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಡಿಯಲ್ಲಿ ಚೀನಾ ಕ್ಯಾತೆ, ಬೆಲೆ ಏರಿಕೆ, ಲಸಿಕೆ ಕೊರತೆ ಮುಂತಾದ ಸಮಸ್ಯೆಗಳನ್ನು ದೇಶಕ್ಕೆ ತಂದಿಟ್ಟವರು ಯಾರು ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.  ಶತಮಾನಗಳ ಕಾಲ ನಿರ್ಮಿಸಲಾದ ದೇಶವನ್ನು ಸೆಕೆಂಡ್ ಗಳಲ್ಲಿ ಅಳಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ,  ಬೆಲೆಏರಿಕೆ, ಗಡಿ ರೇಖೆಯಲ್ಲಿ ಸಮಸ್ಯೆ,ರೈತರ ಪ್ರತಿಭಟನೆ ಮುಂತಾದ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ವಿದೇಶ ಹಾಗೂ ರಕ್ಷಣಾ ನೀತಿಯನ್ನು ಭಾರತ ಸರ್ಕಾರವು ದೇಶೀಯ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದ್ದು, ನಮ್ಮ ದೇಶವನ್ನು ದುರ್ಬಲಗೊಳಿಸಿದೆ. ಭಾರತ ಎಂದಿಗೂ ಇಷ್ಟೊಂದು ಅಭದ್ರ ಸ್ಥಿತಿ ಎದುರಿಸಿರಲಿಲ್ಲ' ಎಂದು ಹೇಳಿದ್ದಾರೆ. 

SCROLL FOR NEXT