ದೇಶ

ಉ.ಪ್ರದೇಶದಲ್ಲಿ ಚುನಾವಣೆ ಸನ್ನಿಹದಲ್ಲಿರುವ ಕಾರಣಕ್ಕೆ ಜನಸಂಖ್ಯಾ ನಿಯಂತ್ರಣ ಬಿಲ್ ಅನುಷ್ಟಾನಗೊಳ್ಳಬಾರದು-ಸಂಜಯ್ ರಾವತ್

Nagaraja AB

ಮುಂಬೈ: ಚುನಾವಣೆ ಸನ್ನಿಹದಲ್ಲಿರುವ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆ ಅನುಷ್ಠಾನ ಗೊಳ್ಳಬಾರದು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿದ್ದೇವೆ. ನಂತರ ವಿಶ್ಲೇಷಿಸಿ ರಾಷ್ಟ್ರಮಟ್ಟದಲ್ಲಿ ಅದರ ಕುರಿತು ಚರ್ಚೆ ನಡೆಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಚುನಾವಣೆ ಸನ್ನಿಹದಲ್ಲಿರುವ ಕಾರಣಕ್ಕೆ ಮಾತ್ರ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಒಂದು ವೇಳೆ ಅದು ಅನುಷ್ಠಾನಗೊಂಡರೆ ಜನಸಂಖ್ಯಾ ಹೆಚ್ಚಾಗಿರುವ  ಬಿಹಾರ ಮತ್ತಿತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

SCROLL FOR NEXT