ಪ್ರತ್ಯಕ್ಷ ದೃಶ್ಯ 
ದೇಶ

ಭೀಕರ ದೃಶ್ಯ: ಕಾಡಾನೆ ಹಿಂಡಿನ ಮುಂದೆ ಕೀಟಲೆ, ರೊಚ್ಚಿಗೆದ್ದು ವ್ಯಕ್ತಿಯೋರ್ವನನ್ನು ತುಳಿದ ಕಾಡಾನೆ; ವಿಡಿಯೋ ವೈರಲ್!

ರಸ್ತೆ ದಾಟುತ್ತಿದ್ದ ಕಾಡಾನೆ ಹಿಂಡಿನ ಮುಂದೆ ಜನಸಮೂಹ ಕೀಟಲೆ ಮಾಡಿದ್ದು ಇದರಿಂದ ರೊಚ್ಚಿಗೆದ್ದ ಕಾಡಾನೆಯೊಂದು ಯುವಕನೋರ್ವನನ್ನು ಹಿಂಬಾಲಿಸಿ ತುಳಿದು ಹಾಕಿದ ಭೀಕರ ವಿಡಿಯೋ ವೈರಲ್ ಆಗಿದೆ. 

ಗುವಾಹಟಿ: ರಸ್ತೆ ದಾಟುತ್ತಿದ್ದ ಕಾಡಾನೆ ಹಿಂಡಿನ ಮುಂದೆ ಜನಸಮೂಹ ಕೀಟಲೆ ಮಾಡಿದ್ದು ಇದರಿಂದ ರೊಚ್ಚಿಗೆದ್ದ ಕಾಡಾನೆಯೊಂದು ಯುವಕನೋರ್ವನನ್ನು ಹಿಂಬಾಲಿಸಿ ತುಳಿದು ಹಾಕಿದ ಭೀಕರ ವಿಡಿಯೋ ವೈರಲ್ ಆಗಿದೆ. 

ಜುಲೈ 25 ರಂದು ಈ ಘಟನೆ ನಡೆದಿದ್ದು ಪ್ಯಾಸ್ಕಲ್ ಮುಂಡಾ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. 

ಅಸ್ಸಾಂನ ನುಮಲಿಘಡದ ಮೊರೊಂಗಿ ಟೀ ಎಸ್ಟೇಟ್ ಬಳಿ ಎನ್ಎಚ್ 39ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು ಹಾದುಹೋಗುತ್ತಿದ್ದಾಗ ಕಾರ್ಮಿಕರ ಮತ್ತು ದಾರಿಹೋಕರ ಗುಂಪೊಂದು ಮುಖಾಮುಖಿಯಾಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಶಾಂತವಾಗಿ ರಸ್ತೆ ದಾಟುತ್ತಿದ್ದ ಆನೆಗಳಿಗೆ ಕೀಟಲೆ ಮಾಡುತ್ತಿರುವುದು ಕಾಣಬಹುದು. ಇದರಿಂದ ರೊಚ್ಚಿಗೆದ್ದ ಕಾಡಾನೆಯೊಂದು ಯುವಕ ಗುಂಪನ್ನು ಹಿಂಬಾಲಿಸಿದೆ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದ ಯುವಕನನ್ನು ಕಾಡಾನೆ ತುಳಿದು ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT