ಆಂಟನಿ ಬ್ಲಿಂಕೆನ್ 
ದೇಶ

ಧ್ವನಿ ಎತ್ತಲು ಪ್ರತಿಯೊಬ್ಬರೂ ಅರ್ಹರು, ಯಾರೆಂದು ಬೇಧ ತೋರದೆ ಗೌರವಿಸಬೇಕು: ಆಂಟನಿ ಬ್ಲಿಂಕೆನ್

ಸಮಾಜದಲ್ಲಿ ಧ್ವನಿ ಎತ್ತಲು ಪ್ರತಿಯೊಬ್ಬರು ಅರ್ಹರು. ಇನ್ನು ಅವರು ಯಾರೆಂದು ಪ್ರಶ್ನಿಸದೆ ಗೌರವಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದರು. 

ನವದೆಹಲಿ: ಸಮಾಜದಲ್ಲಿ ಧ್ವನಿ ಎತ್ತಲು ಪ್ರತಿಯೊಬ್ಬರು ಅರ್ಹರು. ಇನ್ನು ಅವರು ಯಾರೆಂದು ಪ್ರಶ್ನಿಸದೆ ಗೌರವಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದರು.

ಸಮಾನತೆ, ಕಾನೂನಿನ ನಿಯಮ, ಮೂಲಭೂತ ಸ್ವಾತಂತ್ರ್ಯಗಳು, ಧರ್ಮದ ಸ್ವಾತಂತ್ರ್ಯ ಮತ್ತು ನಂಬಿಕೆ ಸೇರಿದಂತೆ ಭಾರತ ಮತ್ತು ಅಮೆರಿಕ ಯಾವಾಗಲೂ ಪ್ರಜಾಪ್ರಭುತ್ವ ಪರವಾಗಿವೆ. ಇದು ನಮ್ಮ ಸಂಬಂಧದ ಆಧಾರವೂ ಆಗಿದೆ ಎಂದು ಆಂಟನಿ ಬ್ಲಿಂಕೇನ್ ಹೇಳಿದರು.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಆಂಟನಿ ಬ್ಲಿಂಕೆನ್ ಭಾರತೀಯ ಸಿವಿಲ್ ಸೊಸೈಟಿ ಸದಸ್ಯ ಜೊತೆ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಿಂಕೆನ್, ಅಮೆರಿಕಾ ಮತ್ತು ಭಾರತ ಎರಡೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಭದ್ಧತೆಯನ್ನು ಹಂಚಿಕೊಳ್ಳುತ್ತವೆ. ಇದು ದ್ವಿಪಕ್ಷೀಯ ಸಂಬಂಧದ ತಳಹದಿಯಾಗಿದೆ ಎಂದರು. 

ಯಶಸ್ವಿ ಪ್ರಜಾಪ್ರಭುತ್ವಗಳು 'ಅಭಿವೃದ್ಧಿ ಹೊಂದುತ್ತಿರುವ' ನಾಗರಿಕ ಸಮಾಜಗಳನ್ನು ಒಳಗೊಂಡಿವೆ. ಪ್ರಜಾಪ್ರಭುತ್ವವನ್ನು 'ಹೆಚ್ಚು ಮುಕ್ತ, ಹೆಚ್ಚು ಅಂತರ್ಗತ, ಹೆಚ್ಚು ಚೇತರಿಸಿಕೊಳ್ಳುವ, ಹೆಚ್ಚು ನ್ಯಾಯಸಮ್ಮತವನ್ನಾಗಿ ಮಾಡಲು ಅವುಗಳು ಅಗತ್ಯವಾಗಿವೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹೇಳಿದರು. 

ವ್ಯಾಪಾರ ಸಹಕಾರ, ಶೈಕ್ಷಣಿಕ ಬಾಂಧವ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳು ಮತ್ತು ಲಕ್ಷಾಂತರ ಕುಟುಂಬಗಳ ನಡುವಿನ ಸಂಬಂಧಗಳು ಪ್ರಮುಖ ಆಧಾರ ಸ್ತಂಭಗಳಾಗಿ ಬ್ಲಿಂಕೆನ್ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಪ್ರಜಾಪ್ರಭುತ್ವ ಮತ್ತು ಅಂತಾರಾಷ್ಟ್ರೀಯ ಸ್ವಾತಂತ್ರ್ಯಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೆದರಿಕೆಗಳನ್ನು ಬ್ಲಿಂಕೆನ್ ಉಲ್ಲೇಖಿಸಿದ್ದಾರೆ. 'ಪ್ರಜಾಪ್ರಭುತ್ವ ಆರ್ಥಿಕ ಹಿಂಜರಿತ'ದ ಬಗ್ಗೆ ಮಾತನಾಡುತ್ತಾ, ಈ ಆದರ್ಶಗಳನ್ನು ಬೆಂಬಲಿಸುವಲ್ಲಿ ಭಾರತ ಮತ್ತು ಯುಎಸ್ ಒಟ್ಟಾಗಿ ನಿಲ್ಲುವುದು ಅತ್ಯಗತ್ಯ ಎಂದರು.

ಇದರ ವಿರುದ್ಧ ಭಾರತ ಹಾಗೂ ಅಮೆರಿಕಾದಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT