ಆಂಟನಿ ಬ್ಲಿಂಕೆನ್ 
ದೇಶ

ಧ್ವನಿ ಎತ್ತಲು ಪ್ರತಿಯೊಬ್ಬರೂ ಅರ್ಹರು, ಯಾರೆಂದು ಬೇಧ ತೋರದೆ ಗೌರವಿಸಬೇಕು: ಆಂಟನಿ ಬ್ಲಿಂಕೆನ್

ಸಮಾಜದಲ್ಲಿ ಧ್ವನಿ ಎತ್ತಲು ಪ್ರತಿಯೊಬ್ಬರು ಅರ್ಹರು. ಇನ್ನು ಅವರು ಯಾರೆಂದು ಪ್ರಶ್ನಿಸದೆ ಗೌರವಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದರು. 

ನವದೆಹಲಿ: ಸಮಾಜದಲ್ಲಿ ಧ್ವನಿ ಎತ್ತಲು ಪ್ರತಿಯೊಬ್ಬರು ಅರ್ಹರು. ಇನ್ನು ಅವರು ಯಾರೆಂದು ಪ್ರಶ್ನಿಸದೆ ಗೌರವಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದರು.

ಸಮಾನತೆ, ಕಾನೂನಿನ ನಿಯಮ, ಮೂಲಭೂತ ಸ್ವಾತಂತ್ರ್ಯಗಳು, ಧರ್ಮದ ಸ್ವಾತಂತ್ರ್ಯ ಮತ್ತು ನಂಬಿಕೆ ಸೇರಿದಂತೆ ಭಾರತ ಮತ್ತು ಅಮೆರಿಕ ಯಾವಾಗಲೂ ಪ್ರಜಾಪ್ರಭುತ್ವ ಪರವಾಗಿವೆ. ಇದು ನಮ್ಮ ಸಂಬಂಧದ ಆಧಾರವೂ ಆಗಿದೆ ಎಂದು ಆಂಟನಿ ಬ್ಲಿಂಕೇನ್ ಹೇಳಿದರು.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಆಂಟನಿ ಬ್ಲಿಂಕೆನ್ ಭಾರತೀಯ ಸಿವಿಲ್ ಸೊಸೈಟಿ ಸದಸ್ಯ ಜೊತೆ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಿಂಕೆನ್, ಅಮೆರಿಕಾ ಮತ್ತು ಭಾರತ ಎರಡೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಭದ್ಧತೆಯನ್ನು ಹಂಚಿಕೊಳ್ಳುತ್ತವೆ. ಇದು ದ್ವಿಪಕ್ಷೀಯ ಸಂಬಂಧದ ತಳಹದಿಯಾಗಿದೆ ಎಂದರು. 

ಯಶಸ್ವಿ ಪ್ರಜಾಪ್ರಭುತ್ವಗಳು 'ಅಭಿವೃದ್ಧಿ ಹೊಂದುತ್ತಿರುವ' ನಾಗರಿಕ ಸಮಾಜಗಳನ್ನು ಒಳಗೊಂಡಿವೆ. ಪ್ರಜಾಪ್ರಭುತ್ವವನ್ನು 'ಹೆಚ್ಚು ಮುಕ್ತ, ಹೆಚ್ಚು ಅಂತರ್ಗತ, ಹೆಚ್ಚು ಚೇತರಿಸಿಕೊಳ್ಳುವ, ಹೆಚ್ಚು ನ್ಯಾಯಸಮ್ಮತವನ್ನಾಗಿ ಮಾಡಲು ಅವುಗಳು ಅಗತ್ಯವಾಗಿವೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹೇಳಿದರು. 

ವ್ಯಾಪಾರ ಸಹಕಾರ, ಶೈಕ್ಷಣಿಕ ಬಾಂಧವ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳು ಮತ್ತು ಲಕ್ಷಾಂತರ ಕುಟುಂಬಗಳ ನಡುವಿನ ಸಂಬಂಧಗಳು ಪ್ರಮುಖ ಆಧಾರ ಸ್ತಂಭಗಳಾಗಿ ಬ್ಲಿಂಕೆನ್ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಪ್ರಜಾಪ್ರಭುತ್ವ ಮತ್ತು ಅಂತಾರಾಷ್ಟ್ರೀಯ ಸ್ವಾತಂತ್ರ್ಯಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೆದರಿಕೆಗಳನ್ನು ಬ್ಲಿಂಕೆನ್ ಉಲ್ಲೇಖಿಸಿದ್ದಾರೆ. 'ಪ್ರಜಾಪ್ರಭುತ್ವ ಆರ್ಥಿಕ ಹಿಂಜರಿತ'ದ ಬಗ್ಗೆ ಮಾತನಾಡುತ್ತಾ, ಈ ಆದರ್ಶಗಳನ್ನು ಬೆಂಬಲಿಸುವಲ್ಲಿ ಭಾರತ ಮತ್ತು ಯುಎಸ್ ಒಟ್ಟಾಗಿ ನಿಲ್ಲುವುದು ಅತ್ಯಗತ್ಯ ಎಂದರು.

ಇದರ ವಿರುದ್ಧ ಭಾರತ ಹಾಗೂ ಅಮೆರಿಕಾದಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT