ಮನೀಶ್ ಸಿಸೋಡಿಯಾ 
ದೇಶ

ದುಬಾರಿ ಫೀಸ್: ದೆಹಲಿಯ ಮತ್ತೊಂದು ಖಾಸಗಿ ಶಾಲೆ ಸರ್ಕಾರದ ವಶಕ್ಕೆ!!!

ದುಬಾರಿ ಶುಲ್ಕದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮತ್ತೊಂದು ಖಾಸಗಿ ಶಾಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.

ನವದೆಹಲಿ:  ದುಬಾರಿ ಶುಲ್ಕದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮತ್ತೊಂದು ಖಾಸಗಿ ಶಾಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.

ಈ ಹಿಂದೆ ದೆಹಲಿಯ ಶೇಖ್ ಸರೈನಲ್ಲಿರುವ ಅಪೀಜಯ್ ಶಾಲೆಯನ್ನು ವಶಕ್ಕೆ ಪಡೆದ ನಂತರ ದೆಹಲಿ ಸರ್ಕಾರವು ರೋಹಿಣಿಯಲ್ಲಿರುವ ಬಾಲ ಭಾರತಿ ಖಾಸಗಿ ಶಾಲೆಯನ್ನು ವಶಕ್ಕೆ ಪಡೆದಿದೆ. ಶಾಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ದೆಹಲಿ ಸರ್ಕಾರವು ಶಾಲೆಗೆ "ಅನಿಯಂತ್ರಿತ ದರ ಹೆಚ್ಚಳ" ವನ್ನು ಹಿಂತೆಗೆದುಕೊಳ್ಳುವಂತೆ ಅನೇಕ ಆದೇಶಗಳನ್ನು ನೀಡಿತ್ತು, ಆದರೆ ಶಾಲಾ ಆಡಳಿತ ಮಂಡಳಿ ಈ ಆದೇಶಗಳನ್ನು ಪಾಲಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ಇದೀಗ ಸರ್ಕಾರ ಶಾಲೆಯನ್ನೇ ತನ್ನ ವಶಕ್ಕೆ ಪಡೆದಿದೆ ಎನ್ನಲಾಗಿದೆ.  

ಶಿಕ್ಷಣ ನಿರ್ದೇಶನಾಲಯ (ಡಿಒಇ) 2016-2017 ಮತ್ತು 2017-2018ರ ಆರ್ಥಿಕ ವರ್ಷಗಳಲ್ಲಿ ಬಾಲ ಭಾರತಿ ಶಾಲೆಯ ಹಣಕಾಸು ವರದಿಗಳ ಪರಿಶೀಲನೆ ನಡೆಸಿತ್ತು. ತಪಾಸಣೆಯ ಸಮಯದಲ್ಲಿ, ಡಿಒಇ 2017-18ನೇ ಸಾಲಿನ ಶಾಲೆಯೊಂದಿಗಿನ ಒಟ್ಟು ಹಣ 23,81,82,958 ರೂ ಎಂದು ಕಂಡು ಬಂದಿತ್ತು.   20,94,38,802 ರೂ.ಗಳನ್ನು ಖರ್ಚು ಮಾಡಿದ ನಂತರವೂ ಶಾಲಾ ಆಡಳಿತವು ರೂ .2,87,44,156 ನಿವ್ವಳ ಹೆಚ್ಚುವರಿ ಹಣ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡ ನಂತರ, ಶುಲ್ಕವನ್ನು ಹೆಚ್ಚಿಸಲು ನಿರ್ವಹಣೆಯ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಡಿಒಇ ಬಂದಿತ್ತು. ಈ ನಿಟ್ಟಿನಲ್ಲಿ, 2017-2018 ಶೈಕ್ಷಣಿಕ ವರ್ಷದಲ್ಲಿ  ಶಾಲೆಯು ಪ್ರಸ್ತಾಪಿಸಿದ ಶುಲ್ಕ ಹೆಚ್ಚಳವನ್ನು ಸ್ವೀಕರಿಸಲು ನಿರ್ದೇಶನಾಲಯ ನಿರಾಕರಿಸಿದೆ.

ಶಾಲೆಯ ದುಬಾರಿ ಶುಲ್ಕದ ವಿರುದ್ಧ ಅನೇಕ ದೂರುಗಳು ಬಂದ ಬಳಿಕ ಡಿಇಒ ಶಾಲೆಗೆ ಮೇ 10, 2019 ರಂದು ನೋಟಿಸ್ ನೀಡಿ, ಶಾಲೆಯ ಮಾನ್ಯತೆಯನ್ನು ಏಕೆ ರದ್ದುಗೊಳಿಸಬಾರದು ಅಥವಾ ಸರ್ಕಾರವು ಶಾಲೆಯ ನಿರ್ವಹಣೆಯನ್ನು ಏಕೆ ತೆಗೆದುಕೊಳ್ಳಬಾರದು ಎಂದು ಕೇಳಿದ್ದರು.  ಆದರೆ ಇದಕ್ಕೆ ಶಾಲೆಯಿಂದ ಬಂದ ಉತ್ತರ ತೃಪ್ತಿಕರವಾಗಿರಲಿಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶಾಲೆಯ ನಿರ್ವಹಣೆಯನ್ನು ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ, ಮತ್ತು ಈ ಕುರಿತ ಕಡತವನ್ನು ಲೆಫ್ಟಿನೆಂಟ್ ಗವರ್ನರ್ಗೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಈ ಕಡತಕ್ಕೆ ಲೆಫ್ಟಿನೆಂಟ್ ಗವರ್ನರ್ ಕೂಡ ಅನುಮೋದಿಸಿದ್ದಾರೆ ಮತ್ತು ಮುಂದಿನ ಕ್ರಮಗಳು ಪ್ರಗತಿಯಲ್ಲಿವೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಶಿಕ್ಷಣ ಸಚಿವರಾಗಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದುಬಾರಿ ಶುಲ್ಕದ ಕುರಿತು ಪೋಷಕರಿಗೆ ಭರವಸೆ ನೀಡಿದ್ದರು, ಕೇಜ್ರಿವಾಲ್ ಸರ್ಕಾರವು ಶಾಲೆಗಳನ್ನು ಅನಿಯಂತ್ರಿತವಾಗಿ ಶುಲ್ಕವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. "ಯಾವುದೇ ಶಾಲೆ ಇದನ್ನು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಂದೆ ಕಂಪನಿಯ ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ CM, DCM?; Cartier ವಾಚಿನ ಬೆಲೆ ಎಷ್ಟು ಗೊತ್ತಾ?

PMO ಕಚೇರಿಗೆ 'ಸೇವಾ ತೀರ್ಥ': ದೇಶದಲ್ಲಿರುವ ಎಲ್ಲಾ ರಾಜಭವನಗಳಿಗೆ 'ಲೋಕಭವನ' ಎಂದು ಮರುನಾಮಕರಣ!

ಗೌತಮ್ ಗಂಭೀರ್ ಗೆ ಮೂಗುದಾರ..? ಮೆಂಟರ್ ಆಗಿ MS Dhoni ಎಂಟ್ರಿ.. 2026 ಟಿ20 ವಿಶ್ವಕಪ್ ಗೆ ಸಿದ್ಧತೆ!

ಯುಪಿಯಲ್ಲಿ ಮತ್ತೊಬ್ಬ BLO ಸಾವು; SIR ಕೆಲಸದ ಒತ್ತಡಕ್ಕೆ ಒಂದೇ ವಾರದಲ್ಲಿ ಐವರು ಬಲಿ

SIR ಚರ್ಚೆಗೆ ಕೇಂದ್ರ ಸಿದ್ಧ, 'ಯಾವುದೇ ಷರತ್ತು ಹಾಕಬೇಡಿ' ಎಂದ ಸಚಿವ ರಿಜಿಜು; ಪ್ರತಿಪಕ್ಷಗಳ ಸಭಾತ್ಯಾಗ!

SCROLL FOR NEXT