ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ದೇಶ

ಸಾಂಕ್ರಾಮಿಕ ಎದುರಿಸಲು "ಒಂದೇ ಭೂಮಿ, ಒಂದೇ ಆರೋಗ್ಯ" ವಿಧಾನ ಅಳವಡಿಕೆಗೆ ಜಿ-7 ಶೃಂಗಸಭೆಯಲ್ಲಿ ಮೋದಿ ಕರೆ

ಜಿ-7 ಶೃಂಗಸಭೆಯ ಅಧಿವೇಶನದಲ್ಲಿ ವರ್ಚ್ಯುಯಲ್ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಜಾಗತಿಕ ಸಮುದಾಯ ಒನ್ ಹೆಲ್ತ್ ಒನ್ ಅರ್ತ್ (ಒಂದೇ ಭೂಮಿ ಒಂದೇ ಆರೋಗ್ಯ) ಕಾರ್ಯವಿಧಾನ ಅಳವಡಿಕೆಗೆ ಕರೆ ನೀಡಿದ್ದಾರೆ. 

ನವದೆಹಲಿ: ಜಿ-7 ಶೃಂಗಸಭೆಯ ಅಧಿವೇಶನದಲ್ಲಿ ವರ್ಚ್ಯುಯಲ್ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಜಾಗತಿಕ ಸಮುದಾಯ ಒನ್ ಹೆಲ್ತ್ ಒನ್ ಅರ್ತ್ (ಒಂದೇ ಭೂಮಿ ಒಂದೇ ಆರೋಗ್ಯ) ಕಾರ್ಯವಿಧಾನ ಅಳವಡಿಕೆಗೆ ಕರೆ ನೀಡಿದ್ದಾರೆ. 

"ಮುಂದಿನ ಸಾಂಕ್ರಾಮಿಕಗಳ ತಡೆಗೆ ಜಾಗತಿಕ ಏಕತೆ, ನಾಯಕತ್ವ, ಒಗ್ಗಟ್ಟಿಗೆ ಪ್ರಧಾನಿ ಕರೆ ನೀಡಿದ್ದು,  ಪ್ರಜಾಸತ್ತೀಯಹಾಗೂ ಪಾರದರ್ಶಕ ಸಮಾಜಗಳಿಗೆ ಇಂತಹ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶೇಷ ಜವಾಬ್ದಾರಿ ಇದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇದೇ ವೇಳೆ ಡಬ್ಲ್ಯುಟಿಒ ಮುಂದಿಡಲಾಗಿರುವ, ಕೋವಿಡ್-19 ಸಂಬಂಧಿತ ತಂತ್ರಜ್ಞಾನಗಳನ್ನು ಪೇಟೆಂಟ್ ಮುಕ್ತಗೊಳಿಸುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾವನೆಗೆ ಪ್ರಧಾನಿ ಮೋದಿ ಜಿ-7 ಬೆಂಬಲವನ್ನೂ ಕೋರಿದ್ದು ಜಾಗತಿಕ ಆರೋಗ್ಯ ಆಡಳಿತದ ಸುಧಾರಣೆಗೆ ಸಾಮೂಹಿಕ ಪ್ರಯತ್ನಗಳಿಗೂ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ. 

ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಾಲಿ, ಜಪಾನ್, ಅಮೆರಿಕಾಗಳು ಜಿ-7 ರಾಷ್ಟ್ರಗಳಾಗಿದ್ದು, ಆಯೋಜಕ ರಾಷ್ಟ್ರ ಬ್ರಿಟನ್ ಶೃಂಗಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾಗಳನ್ನು ಆಹ್ವಾನಿಸಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?