ಚಿರಾಗ್ ಪಾಸ್ವಾನ್ 
ದೇಶ

ಪಕ್ಷ ತಾಯಿ ಇದ್ದಂತೆ, ದ್ರೋಹ ಮಾಡಬಾರದು: ಚಿರಾಗ್ ಪಾಸ್ವಾನ್ 

'ಜೆಡಿಯು ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದಿದ್ದ ಐವರು ಸಂಸದರನ್ನು ಉಚ್ಚಾಟಣೆ ಮಾಡಲಾಗಿದೆ. ಚಿರಾಗ್ ಪಾಸ್ವಾನ್ ಅವರ ಸಂಬಂಧಿಯೂ ಆಗಿರುವ ಪಶುಪತಿ ಪಾರಸ್ ಈ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಿದ್ದಾರೆ.

ನವದೆಹಲಿ: 'ಜೆಡಿಯು ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದಿದ್ದ ಐವರು ಸಂಸದರನ್ನು ಉಚ್ಚಾಟಣೆ ಮಾಡಲಾಗಿದೆ. ಚಿರಾಗ್ ಪಾಸ್ವಾನ್ ಅವರ ಸಂಬಂಧಿಯೂ ಆಗಿರುವ ಪಶುಪತಿ ಪಾರಸ್ ಈ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರನನ್ನು ಲೋಕಸಭಾ ಕಾರ್ಯದರ್ಶಿಗಳು ಎಲ್ ಜೆಪಿಯ ಲೋಕಸಭಾ ನಾಯಕನೆಂದು ದೃಢೀಕರಿಸಿದ್ದಾರೆ. ಈ ಬೆನ್ನಲ್ಲೇ ಪಕ್ಷದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಪಾಸ್ವಾನ್ ಕುಟುಂಬದ ಇಬ್ಬರು ನಾಯಕರ ಬಣಗಳು ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸುತ್ತಿವೆ.

ಚಿರಾಗ್ ಪಾಸ್ವಾನ್ ಅವರನ್ನು ಸಂಸದೀಯ ಪಕ್ಷದಿಂದ ದೂರ ಇರಿಸಲಾಗಿದ್ದರೂ ಬೇರೆ ನಾಯಕರಿಂದ ಬೆಂಬಲ ದೊರೆಯುತ್ತಿದೆ. ಜೆಡಿಯು ಪಕ್ಷದ ಮೇಲಿನ ನಾಯಕತ್ವದ ನಿರ್ಧಾರವನ್ನು ಚುನಾವಣಾ ಆಯೋಗವೇ ನಿರ್ಧರ್ಸಬೇಕಿದೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, ಟ್ವೀಟ್ ಮಾಡಿದ್ದು, ನನ್ನ ತಂದೆ ಸ್ಥಾಪಿಸಿದ ಪಕ್ಷ ಹಾಗೂ ಕುಟುಂಬವನ್ನು ಒಟ್ಟಾಗಿರಿಸಲು ಯತ್ನಿಸಿದೆ, ಆದರೆ ಅದು ವಿಫಲವಾಯಿತು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ಎಂದು ಹೇಳಿರುವ ಪಾಸ್ವಾನ್, ಪಕ್ಷ ತಾಯಿ ಇದ್ದಂತೆ, ದ್ರೋಹ ಮಾಡಬಾರದು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT