ಸಂಗ್ರಹ ಚಿತ್ರ 
ದೇಶ

#metoo: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಶಿವಶಂಕರ ಬಾಬಾ ಬಂಧನ

ಲೈಂಗಿಕ ಕಿರುಕುಳ ಹಾಗೂ ದುರ್ನಡತೆ ಆರೋಪಗಳ ಮೇಲೆ ಸ್ವಯಂ ಘೋಷಿತ ದೇವಮಾನವ ಹಾಗೂ ನಗರ ಹೊರವಲಯದ ವಸತಿ ಶಾಲೆಯ ಸಂಸ್ಥಾಪಕ ಶಿವಶಂಕರ ಬಾಬಾ ಎಂಬ ವ್ಯಕ್ತಿಯನ್ನು ಪೊಲೀಸರು ದೆಹಲಿ ಸಮೀಪ ಬುಧವಾರ ಬಂಧಿಸಿದ್ದಾರೆ.

ಚೆನ್ನೈ: ಲೈಂಗಿಕ ಕಿರುಕುಳ ಹಾಗೂ ದುರ್ನಡತೆ ಆರೋಪಗಳ ಮೇಲೆ ಸ್ವಯಂ ಘೋಷಿತ ದೇವಮಾನವ ಹಾಗೂ ನಗರ ಹೊರವಲಯದ ವಸತಿ ಶಾಲೆಯ ಸಂಸ್ಥಾಪಕ ಶಿವಶಂಕರ ಬಾಬಾ ಎಂಬ ವ್ಯಕ್ತಿಯನ್ನು ಪೊಲೀಸರು ದೆಹಲಿ ಸಮೀಪ ಬುಧವಾರ ಬಂಧಿಸಿದ್ದಾರೆ.

ಆರೋಪಿ ಬಾಬಾನ ಪತ್ತೆಗಾಗಿ ದೆಹಲಿಗೆ ತೆರಳಿದ್ದ ಸಿಬಿ-ಸಿಐಡಿ ವಿಭಾಗದ ವಿಶೇಷ ಪೊಲೀಸರ ತಂಡ ರಾಷ್ಟ್ರ ರಾಜಧಾನಿಯ ಘಾಜಿಯಾಬಾದ್‌ ನಲ್ಲಿ ಬಂಧಿಸಿದೆ. ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದುಕೊಂಡ ನಂತರ ವಿಚಾರಣೆ ನಡೆಸಲು ಬಾಬಾ ನನ್ನು ಚೆನ್ನೈ ಗೆ ಕರೆ ತರಲಾಗುತ್ತಿದೆ.

ಲೈಂಗಿಕ ಕಿರುಕುಳ ದೂರು ಸಂಬಂಧ ಹಲವು ವಿದ್ಯಾರ್ಥಿಗಳು ನೀಡಿದ್ದ ದೂರುಗಳ ಹಿನ್ನಲೆಯಲ್ಲಿ ಪ್ರಕರಣಗಳು ದಾಖಲಾದ ನಂತರ. ಸುಶಿಲ್‌ ಹರಿ ರೆಸಿಡೆನ್ಸಿಯಲ್‌ ಸ್ಕೂಲ್‌ ಸಂಸ್ಥಾಪಕ ಶಿವ ಶಂಕರ್‌ ಬಾಬಾ ನಗರದಿಂದ ಪರಾರಿಯಾಗಿದ್ದರು. ಡೆಹ್ರಾಡೂನ್‌ ನಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು.

ಈ ಮಾಹಿತಿ ಪಡೆದುಕೊಂಡಿದ್ದ ಪೊಲೀಸ್‌ ತಂಡ, ಆತನ ಬಂಧನಕ್ಕಾಗಿ ಡೆಹ್ರಾಡೂನ್‌ ಗೆ ತೆರಳಿತ್ತು. ಆಸ್ಪತ್ರೆಗೆ ದಾಖಲಾಗಲು ಸಹಕರಿಸಿದ್ದ ಮಹಿಳಾ ಭಕ್ತರೊಬ್ಬರ ಮನೆಯಲ್ಲಿ ಬಾಬಾ ಆಶ್ರಯ ಪಡೆದುಕೊಂಡಿದ್ದ ಮಹಿಳಾ ಭಕ್ತೆಯ ಮೊಬೈಲ್‌ ಸಂಖ್ಯೆಗೆ ಬರುವ ಕರೆಗಳ ಆಧರಿಸಿ ಸಿಬಿ -ಸಿಐಡಿ ತಂಡ ಆಕೆಯ ಮನೆಯಲ್ಲಿ ಬಾಬಾ ಅವರನ್ನು ಬಂಧಿಸಿದೆ.

ಬಾಬಾ ಬಂಧನವಾದ ಕೂಡಲೇ, ಮತ್ತೊಂದು ಪೊಲೀಸರ ತಂಡ ಚೆನ್ನೈನ ಇಸಿಆರ್‌ ಪ್ರದೇಶದಲ್ಲಿರುವ ಶಾಲೆ ಗೆ ಭೇಟಿ ನೀಡಿ ಶಾಲಾ ಸದಸ್ಯರನ್ನು ವಿಚಾರಣೆ ನಡೆಸಿದೆ. ಶಿವ ಶಂಕರ ಬಾಬಾ ವಿರುದ್ದ ಶಾಲೆಯ ಮಾಜಿ ವಿದ್ಯಾರ್ಥಿಗಳು ಲೈಂಗಿಕ ದುರುಪಯೋಗ, ಲೈಂಗಿಕ ಕಿರುಕುಳ, ದುರ್ವತನೆ ದೂರುಗಳನ್ನು ನೀಡಿದ್ದ ಹಿನ್ನಲೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT