ಜ್ಯೋತಿರಾಧಿತ್ಯ ಸಿಂಧಿಯಾ 
ದೇಶ

ಸಿಂಧಿಯಾಗೆ ಭದ್ರತಾ ಲೋಪ: 14 ಪೊಲೀಸರ ಅಮಾನತು

ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪವೆಸಗಿದ್ದಕ್ಕಾಗಿ ಎರಡು ಜಿಲ್ಲೆಗಳ 14 ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಆಡಳಿತ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭೂಪಾಲ್: ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪವೆಸಗಿದ್ದಕ್ಕಾಗಿ ಎರಡು ಜಿಲ್ಲೆಗಳ 14 ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಆಡಳಿತ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ರಾತ್ರಿ ಸಿಂಧಿಯಾ ದೆಹಲಿಯಿಂದ ಬಂದ ನಂತರ ಗ್ವಾಲಿಯರ್ ಗೆ ಹೋಗುತ್ತಿರುವಾಗ ಭದ್ರತಾ ಲೋಪವಾಗಿದೆ. ಸಿಂಧಿಯಾ ಭದ್ರತಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಗ್ವಾಲಿಯರ್ ಜಿಲ್ಲೆಯ ಐದು ಮತ್ತು ಮೊರೆನಾ ಜಿಲ್ಲೆಯ 9 ಮಂದಿ ಸೇರಿದಂತೆ ಒಟ್ಟು 14 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಗ್ವಾಲಿಯರ್ ಪೊಲೀಸ್ ಮಹಾನಿರ್ದೇಶಕ ಅಮತ್ ಸಾಂಘಿ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಾಜಿ ಕೇಂದ್ರ ಸಚಿವರನ್ನು ಮಧ್ಯಪ್ರದೇಶ-ರಾಜಸ್ಥಾನ ಗಡಿಯಲ್ಲಿ ಮೊರೆನಾ ಪೊಲೀಸರು ಬೆಂಗಾವಲು ಮಾಡಬೇಕಾಗಿತ್ತು ಮತ್ತು ನಂತರ ಈ ಕಾರ್ಯವನ್ನು ಗ್ವಾಲಿಯರ್ ನ ಪೊಲೀಸರು ಮಾಡಬೇಕಾಗಿತ್ತು. ಆದರೆ, ಸಿಂಧಿಯಾ ಅವರಿಗೆ ಕಾರಿಗೆ ಹೋಲುತ್ತಿದ್ದ ಮತ್ತೊಂದು ಕಾರಿಗೆ ಗ್ವಾಲಿಯರ್ ಪೊಲೀಸರು ಬೆಂಗಾವಲು ಮಾಡಿದ್ದಾರೆ ಎಂದು ಎಸ್ ಪಿ ಹೇಳಿದ್ದಾರೆ. 

ಮೊರೋನಾ ಪೊಲೀಸರು ಗ್ವಾಲಿಯರ್ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳದಿದ್ದರಿಂದ ಸಿಂಧಿಯಾ ಎಸ್ಕಾರ್ಟ್ ಇಲ್ಲದೆ ಗ್ವಾಲಿಯರ್ ಗೆ ಆಗಮಿಸಿದರು. ಈ ಲೋಪಕ್ಕಾಗಿ ಎರಡು ಜಿಲ್ಲೆಗಳಿಗೆ ಸೇರಿದ 14 ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಂಘಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT