ಕೆ ಆರ್ ಗೌರಿ 
ದೇಶ

ಕೇರಳದ ಶತಾಯುಷಿ ಕಮ್ಯುನಿಸ್ಟ್ ನಾಯಕಿ ಕೆ.ಆರ್. ಗೌರಿ ಇನ್ನಿಲ್ಲ

ಹಿರಿಯ ಕಮ್ಯುನಿಸ್ಟ್ ಮತ್ತು ಜನಾದಿಪತ್ಯ ಸಂರಕ್ಷಣಾ ಸಮಿತಿ (ಜೆಎಸ್ಎಸ್) ಮುಖಂಡರಾಗಿದ್ದ  ಕೆ ಆರ್ ಗೌರಿ ಮಂಗಳವಾರ ನಿಧನರಾದರು. ಆಕೆಗೆ 101 ವರ್ಷ ವಯಸ್ಸಾಗಿತ್ತು.

ತಿರುವನಂತಪುರಂ: ಹಿರಿಯ ಕಮ್ಯುನಿಸ್ಟ್ ಮತ್ತು ಜನಾದಿಪತ್ಯ ಸಂರಕ್ಷಣಾ ಸಮಿತಿ (ಜೆಎಸ್ಎಸ್) ಮುಖಂಡರಾಗಿದ್ದ  ಕೆ ಆರ್ ಗೌರಿ ಮಂಗಳವಾರ ನಿಧನರಾದರು. ಆಕೆಗೆ 101 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಗಳ ನಂತರ ಕಳೆದ ಕೆಲವು ವಾರಗಳಿಂದ ಆಕೆಯನ್ನು ರಾಜ್ಯ ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಅವರರು ಕೊನೆಯುಸಿರೆಳೆದರೆಂದು ಮಾಹಿತಿ ಲಭಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಗೌರಿಯವರ ಆರೋಗ್ಯ ವಿಚಾರಿಸಿದ್ದಾರೆ.

ಕೇರಳದ ಇತಿಹಾಸದಲ್ಲಿ ಒಬ್ಬ ಪ್ರಸಿದ್ಧ ರಾಜಕೀಯ ನಾಯಕಿಯಾಗಿದ್ದ ಗೌರಿ ರಾಜ್ಯದಲ್ಲೇ ಅತಿಹೆಚ್ಚಿನ ಅವಧಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಮಹಿಳೆ ಎನಿಸಿದ್ದರು. ವಿಧಾನಸಭೆಗೆ 10 ಬಾರಿ ಚುನಾಯಿತರಾದ ಅವರು ಆರು ವಿವಿಧ ಸರ್ಕಾರಗಳ ಅವಧಿಯಲ್ಲಿ 16 ವರ್ಷಗಳ ಕಾಲ ಸಚಿವರಾಗಿದ್ದರು. ಕಂದಾಯ, ಅಬಕಾರಿ, ಕೈಗಾರಿಕೆ, ಆಹಾರ ಮತ್ತು ಕೃಷಿ ಸೇರಿದಂತೆ ವಿವಿಧ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು.

ಜೆಎಸ್ಎಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಗೌರಿ 2016 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನಿಂದಾಗಿ ಯುಡಿಎಫ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ನಂತರ, ಅವರ ಪಕ್ಷವು ಎಲ್ಡಿಎಫ್ ನೊಂದಿಗೆ ಕೈಜೋಡಿಸಿತು ಆದರೆ ಇಲ್ಲಿ ಪಕ್ಷವು ಅರ್ಹ ಪ್ರಾತಿನಿಧ್ಯವನ್ನು ಪಡೆಯಲಿಲ್ಲ. ಅದಾಗ ಪಕ್ಷ ಅನೇಕ ಹೋಳಾಗಿ ವಿಭಜನೆಗೊಂಡಿತು. ಅದಾಗ್ಯೂ , ಗೌರಿ ಮತ್ತು ಅವರ ಬೆಂಬಲಿಗರು ಯಾವಾಗಲೂ ಎಡಪಂಥೀಯ ಒಲವನ್ನು ಉಳಿಸಿಕೊಂಡರು. ಅವರನ್ನು ಮತ್ತೆ ಕಮ್ಯುನಿಸ್ಟ್ ಮಡಿಲಿಗೆ ತರಲು ಹಲವಾರು ಪ್ರಯತ್ನಗಳು ನಡೆದರೂ, ಅದು ಈಡೇರದ ಕನಸಾಗಿ ಉಳಿಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT