ಗೀತರಚನೆಕಾರ ವೈರಮುತ್ತು 
ದೇಶ

ಮೀಟೂ: ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ವಾಪಸ್ ನೀಡಿದ ಗೀತರಚನೆಕಾರ ವೈರಮುತ್ತು 

ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಚೆನ್ನೈ: ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈರಮುತ್ತು ಪ್ರಶಸ್ತಿ ತೀರ್ಪುಗಾರರಿಗೆ ಅವಮಾನವಾಗದಂತೆ ಮಾಡುವುದಕ್ಕೆ ತಾವು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಇದೇ ವೇಳೆ, ಒಎನ್ ವಿ ಕಲ್ಚರಲ್ ಅಕಾಡೆಮಿ ಪ್ರಶಸ್ತಿ ನೀಡುವುದನ್ನು ಮರುಪರಿಶೀಲನೆ ಮಾಡುವ ನಿರ್ಧಾರದ ಹಿಂದೆ ಹಗೆತನವನ್ನು ದೂಷಿಸಿದ್ದಾರೆ. ಇದೇ ವೇಳೆ ಅಕಾಡೆಮಿಯಿಂದ ಘೋಷಣೆ ಮಾಡಲಾಗಿರುವ 3 ಲಕ್ಷ ಬಹುಮಾನದ ಹಣವನ್ನು ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ಗೆ ನೀಡುವಂತೆ ವೈರಮುತ್ತು ಮನವಿ ಮಾಡಿದ್ದು ತಾವೂ ಸಹ 2 ಲಕ್ಷ ರೂಪಾಯಿಗಳನ್ನು ಇದೇ ಕಾರಣಕ್ಕೆ ನೀಡುವುದಾಗಿ ಹೇಳುತ್ತಿದ್ದಾರೆ.

ವಿದ್ವಾಂಸ ತೀರ್ಪುಗಾರರಿಗೆ ನನ್ನ ವಿರುದ್ಧದ ಪ್ರತಿಭಟನೆಯಿಂದ ಮುಜುಗರವಾಗಬಾರದು, ಆದ್ದರಿಂದ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರ ಪ್ರಕಟಿಸುತ್ತಿದ್ದೇನೆ, ಆದ್ದರಿಂದ ವಿವಾದದ ನಡುವೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ತಪ್ಪಿಸುತ್ತಿದ್ದೇನೆ ಎಂದು ವೈರಮುತ್ತು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT