ಗೀತರಚನೆಕಾರ ವೈರಮುತ್ತು 
ದೇಶ

ಮೀಟೂ: ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ವಾಪಸ್ ನೀಡಿದ ಗೀತರಚನೆಕಾರ ವೈರಮುತ್ತು 

ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಚೆನ್ನೈ: ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈರಮುತ್ತು ಪ್ರಶಸ್ತಿ ತೀರ್ಪುಗಾರರಿಗೆ ಅವಮಾನವಾಗದಂತೆ ಮಾಡುವುದಕ್ಕೆ ತಾವು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಇದೇ ವೇಳೆ, ಒಎನ್ ವಿ ಕಲ್ಚರಲ್ ಅಕಾಡೆಮಿ ಪ್ರಶಸ್ತಿ ನೀಡುವುದನ್ನು ಮರುಪರಿಶೀಲನೆ ಮಾಡುವ ನಿರ್ಧಾರದ ಹಿಂದೆ ಹಗೆತನವನ್ನು ದೂಷಿಸಿದ್ದಾರೆ. ಇದೇ ವೇಳೆ ಅಕಾಡೆಮಿಯಿಂದ ಘೋಷಣೆ ಮಾಡಲಾಗಿರುವ 3 ಲಕ್ಷ ಬಹುಮಾನದ ಹಣವನ್ನು ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ಗೆ ನೀಡುವಂತೆ ವೈರಮುತ್ತು ಮನವಿ ಮಾಡಿದ್ದು ತಾವೂ ಸಹ 2 ಲಕ್ಷ ರೂಪಾಯಿಗಳನ್ನು ಇದೇ ಕಾರಣಕ್ಕೆ ನೀಡುವುದಾಗಿ ಹೇಳುತ್ತಿದ್ದಾರೆ.

ವಿದ್ವಾಂಸ ತೀರ್ಪುಗಾರರಿಗೆ ನನ್ನ ವಿರುದ್ಧದ ಪ್ರತಿಭಟನೆಯಿಂದ ಮುಜುಗರವಾಗಬಾರದು, ಆದ್ದರಿಂದ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರ ಪ್ರಕಟಿಸುತ್ತಿದ್ದೇನೆ, ಆದ್ದರಿಂದ ವಿವಾದದ ನಡುವೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ತಪ್ಪಿಸುತ್ತಿದ್ದೇನೆ ಎಂದು ವೈರಮುತ್ತು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT