ವಿವಾಹ (ಸಾಂಕೇತಿಕ ಚಿತ್ರ) 
ದೇಶ

ಕೇರಳ: ವಿವಾಹವಾದ ಮರುದಿನವೇ ಗೆಳತಿಯೊಂದಿಗೆ ಮಹಿಳೆ ಪರಾರಿ; ಮಧುರೈ ನಲ್ಲಿ ಪತ್ತೆ!

ವಿವಾಹವಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗೆಳತಿಯ ಜೊತೆ ಪರಾರಿಯಾಗಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ. 

ತ್ರಿಶೂರ್: ವಿವಾಹವಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗೆಳತಿಯ ಜೊತೆ ಪರಾರಿಯಾಗಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ. 

ಕೇರಳದ ತ್ರಿಶೂರ್ ನ ಮಹಿಳೆ ತನ್ನ ವಿವಾಹವಾದ ಮರುದಿನ ನಾಪತ್ತೆಯಾಗಿದ್ದಾರೆ. ನವವಿವಾಹಿತೆಯ ಪತಿಗೆ ಹೃದಯಾಘಾತ ಸಂಭವಿಸಿದ್ದು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು, ತ್ರಿಶೂರ್ ನ ಪಝುವಿಲ್ ನ 23 ವರ್ಷದ ಮಹಿಳೆ ಈ ರೀತಿ ಮಾಡಿದ್ದಾರೆ. ಆರು ದಿನಗಳ ಸುಧೀರ್ಘ ತನಿಖೆಯ ನಂತರ ಈ ಮಾಹಿತಿ ಬೆಳಕಿಗೆ ಬಂದಿದೆ. 

ವಿವಾಹಕ್ಕೂ ಮುನ್ನವೇ ಈಕೆ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಯೋಜಿಸಿದ್ದರು. ಆದರೆ ತನ್ನ ಪೋಷಕರಿಂದ ಚಿನ್ನಾಭರಣಗಳನ್ನು ಪಡೆಯುವುದಕ್ಕಾಗಿ ವಿವಾಹ ಕಾರ್ಯಕ್ರಮ ನಡೆಯುವವರೆಗೂ ಕಾದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. 

ಆಕೆಯ ಪತಿ ಚವಕ್ಕಾಡ್ ನ ಮೂಲದವರಾಗಿದ್ದು, ಪೊಲೀಸ್ ಠಾಣೆಯಲ್ಲಿ ಅ.25 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ನೂತನ ದಂಪತಿ ವಾಣಿಜ್ಯ ಬ್ಯಾಂಕ್ ಗೆ ಭೇಟಿ ನೀಡಿದ್ದರು. ಈ ವೇಳೆ ನನ್ನಿಂದ ಮೊಬೈಲ್ ಪಡೆದ ಮಹಿಳೆ ತನ್ನ ಸ್ನೇಹಿತೆಯನ್ನು ಭೇಟಿ ಮಾಡಿ ತಕ್ಷಣವೇ ವಾಪಸ್ಸಾಗುತ್ತೇನೆ ಎಂದು ತಿಳಿಸಿ ಹೋಗಿದ್ದರು. ದ್ವಿಚಕ್ರವಾಹನದಲ್ಲಿ ತೆರಳಿದ ಆಕೆ ಮತ್ತೆ ವಾಪಸ್ ಬರಲೇ ಇಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದರು. 

ಸಂಜೆ 5 ವರೆಗೂ ಕಾದಿದ್ದ ಆ ವ್ಯಕ್ತಿ ತನ್ನ ಪತ್ನಿ ವಾಪಸ್ಸಾಗದೇ ಇದ್ದದ್ದನ್ನು ನೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತ್ರಿಶೂರ್ ನಿಂದ ಆ ಮಹಿಳೆ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕಾಗಿ ಚೆನ್ನೈ ಗೆ ಟ್ರೈನ್ ಟಿಕೆಟ್ ಕಾಯ್ದಿರಿಸಿದ್ದರೆಂದು ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ ಇಬ್ಬರೂ ಮಹಿಳೆಯರು ರೈಲಿನಲ್ಲಿ ತೆರಳದೇ ಕೊಟ್ಟಾಯಂಗೆ ಬಸ್ ಮೂಲಕ ಪ್ರಯಾಣಿಸಿ ಅಲ್ಲಿಂದ ಚೆನ್ನೈ ಗೆ ರೈಲಿನಲ್ಲಿ ಮರುದಿನ ತೆರಳಿದ್ದಾರೆ. ಚೆನ್ನೈ ನಿಂದ ಮಧುರೈಗೆ ತೆರಳಿ ಅಲ್ಲಿ ಹೊಟೇಲ್ ಒಂದರಲ್ಲಿದ್ದರು ಎಂದು ಪೊಲೀಸರು ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಮಧುರೈ ನಲ್ಲಿ ಒಂದು ದಿನ ಕಳೆದ ಬಳಿಕ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ವಾಪಸ್ ಪಡೆಯುವುದಕ್ಕಾಗಿ ತ್ರಿಶೂರ್ ಗೆ ಆಗಮಿಸಿದ್ದಾರೆ. ಅಲ್ಲಿಂದ ಎರ್ನಾಕುಲಂ ಗೆ ದ್ವಿಚಕ್ರ ವಾಹನದಲ್ಲೇ ತೆರಳಿದ ಮಹಿಳೆಯರು 10 ದಿನಗಳಿಗೆ ಪಾರ್ಕಿಂಗ್ ಶುಲ್ಕವನ್ನು ಮುಂಗಡವಾಗಿ ನೀಡಿ ಮತ್ತೆ ಮಧುರೈಗೆ ತೆರಳಿದ್ದರು. 

ಇಬ್ಬರೂ ಮಹಿಳೆಯರು ಮಧುರೈ ನಲ್ಲೇ ಟೆಕ್ಸ್ ಟೈಲ್ಸ್  ಉದ್ಯೋಗ ಹುಡುಕಿ ಅಲ್ಲೇ ಜೀವಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಚ್ಚರಿಯೆಂದರೆ ಇಬ್ಬರೂ ಮಹಿಳೆಯರು ನವವಿವಾಹಿತರಾಗಿದ್ದಾರೆ. ಮತ್ತೋರ್ವ ಮಹಿಳೆ ಸಹ ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT