ಅಮೆಜಾನ್ 
ದೇಶ

ಅಮೆಜಾನ್ ನಲ್ಲಿ ಡ್ರಗ್ಸ್? ಬೆಚ್ಚಿಬೀಳಿಸುವ ವಿಷಯ ಬಾಯ್ಬಿಟ್ಟ ಬಂಧಿತರು; ಈಗಾಗಲೆ 1.1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಮಾರಾಟ!

ಮಧ್ಯಪ್ರದೇಶದ ಭಿಂಡ್ ನ ಢಾಬಾದಲ್ಲಿ ಪತ್ತೆಯಾಗಿರುವ 20 ಕೆಜಿ ಮರಿಜುನಾ (Marijuana - ಒಂದು ರೀತಿಯ ಗಾಂಜಾ ಪದಾರ್ಥ) ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಆರೋಪಿಗಳನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಭಿಂಡ್: ಮಧ್ಯಪ್ರದೇಶದ ಭಿಂಡ್ ನ ಢಾಬಾದಲ್ಲಿ ಪತ್ತೆಯಾಗಿರುವ 20 ಕೆಜಿ ಮರಿಜುನಾ (Marijuana - ಒಂದು ರೀತಿಯ ಗಾಂಜಾ ಪದಾರ್ಥ) ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಆರೋಪಿಗಳನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಎಸ್ ಪಿ ಮನೋಜ್ ಕುಮಾರ್ ಸಿಂಗ್ ಅಮೆಜಾನ್ ಅಧಿಕಾರಿಗಳ ಜೊತೆಗೆ ನಡೆಸಿದ ಚರ್ಚೆ ಬಗ್ಗೆ ಮಾಹಿತಿ ನೀಡಿದ ಅವರು, ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿಲ್ಲ. ಆದ್ರೆ, ತನಿಖೆ ಮತ್ತು ಅಗತ್ಯವಿರುವ ಮಾಹಿತಿಗಾಗಿ ಇಮೇಲ್ ಕಳಿಸುವಂತೆ ಸೂಚಿಸಿದ್ದರು. ಅದರಂತೆ ಅಮೆಜಾನ್ ಕಂಪನಿ ಸಿಬ್ಬಂದಿಗೆ ಇಮೇಲ್ ರವಾನಿಸಿದ್ದೇವೆ ಅಂತಾ ತಿಳಿಸಿದರು.

ಢಾಬಾದಲ್ಲಿ ಬಂಧಿಯಾಗಿರುವ ಇಬ್ಬರು ಆರೋಪಿಗಳನ್ನು ಸೂರಜ್ ಪಾವೈ ಮತ್ತು ವಿಜೇಂದ್ರ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ. ಗುಜರಾತ್ ನ ಅಹಮದಾಬಾದ್ ನ ಬಾಬು ಟೆಕ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ಸೂಪರ್ ನ್ಯಾಚುರಲ್ ಡ್ರೈ ಲೀಫ್ ಹೆಸರಲ್ಲಿ ಅಮೆಜಾನ್ ವೆಬ್ ಸೈಟ್ ಮೂಲಕ ಈ ಗಾಂಜಾ ಮಾರಾಟ ಮಾಡಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ. ವೆಬ್ ಸೈಟ್ ನಲ್ಲಿ 2 ಕಿಲೋ ಗ್ರಾಂ ಎಲೆಗಳ ಬೆಲೆ ₹ 180 ರೂಪಾಯಿ ಆಗಿದೆ. 1 ಟನ್ ಗಾಂಜಾವನ್ನು ಈಗಾಗಲೇ ಇ-ಕಾಮರ್ಸ್ ವೆಬ್ ಸೈಟ್ ಮೂಲಕ ₹ 1.1 ಕೋಟಿಗೆ ಮಾರಾಟ ಮಾಡಲಾಗಿದೆ.

ಕಳೆದ ಏಳು ತಿಂಗಳಲ್ಲಿ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 384 ಆರ್ಡರ್‌ಗಳ ಮೂಲಕ 768 ಕೆಜಿ ಗಾಂಜಾವನ್ನು ಸರಬರಾಜು ಮಾಡಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಎಲ್ಲ ರೀತಿಯ ಪಾವತಿಗಳನ್ನು ಕೇವಲ ಒಂದೇ UPI ಐಡಿ ಮೂಲಕ ಮಾಡಿರುವುದು ಪೊಲೀಸರನ್ನು ಬೆಚ್ಚಿಬೀಳಿಸಿದೆ.

ಅಮೆಜಾನ್ ಕಂಪನಿಯಿಂದ ಮಾರಾಟವಾದ ವಸ್ತುವಿನ ಮೇಲೆ ಅಂದರೆ 180 ರೂಪಾಯಿಯಲ್ಲಿ 66.66% ಪಾಲನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಕಂಪನಿಯು ಇದರಲ್ಲಿ ಲಾಭ ಗಳಿಸುತ್ತಾರೆ ಅಂತಾ ತನಿಖಾಧಿರಿಯೊಬ್ಬರು ತಿಳಿಸಿದ್ದಾರೆ.

ತನಿಖಾ ಹಂತದಲ್ಲಿ ಕಂಪನಿಯ ಉದ್ಯೋಗಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್‌ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇ-ಕಾಮರ್ಸ್ ಸೈಟ್‌ನಲ್ಲಿ ಆಪಾದಿತ ಗಾಂಜಾ ಮಾರಾಟಕ್ಕಾಗಿ ಅಮೆಜಾನ್ ವಿರುದ್ಧ ಎನ್‌ಸಿಬಿ ಕ್ರಮಕ್ಕೆ ವ್ಯಾಪಾರಿಗಳ ಸಂಘ ಒತ್ತಾಯಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT