ವೈದ್ಯ ಮನೋಜ್ ಮಿತ್ತಲ್ 
ದೇಶ

ಸಗಣಿ ತಿಂದ ವೈದ್ಯ! ಅದಕ್ಕೆ ಅವರು ಕೊಟ್ಟ ಉತ್ತರ ದಂಗಾಗಿಸಿದೆ; ವಿಡಿಯೋ ನೋಡಿ!

ಯಾರಾದರೂ ನಿಮಗೆ ಹಸುವಿನ ಸಗಣಿ ತಿಂದಿದ್ದೀರಾ? ಎಂದು ಕೇಳಿದರೆ ನೀವು ಬಹುಶಃ ಅವರ ಮೇಲೆ ಕೋಪಗೊಳ್ಳಬಹುದು. ಆದರೆ ವೈದ್ಯರು ಹಸುವಿನ ಸಗಣಿ ತಿನ್ನಲು ಸಲಹೆ ನೀಡುತ್ತಾರೆ. ಸಲಹೆಯನ್ನು ಬಿಡಿ. ಹಸುವಿನ ಸಗಣಿ ತಿಂದು ತೋರಿಸಿದ್ದಾರೆ.

ಕರ್ನಾಲ್‌ (ಹರಿಯಾಣ): ಯಾರಾದರೂ ನಿಮಗೆ ಹಸುವಿನ ಸಗಣಿ ತಿಂದಿದ್ದೀರಾ? ಎಂದು ಕೇಳಿದರೆ ನೀವು ಬಹುಶಃ ಅವರ ಮೇಲೆ ಕೋಪಗೊಳ್ಳಬಹುದು. ಆದರೆ ವೈದ್ಯರು ಹಸುವಿನ ಸಗಣಿ ತಿನ್ನಲು ಸಲಹೆ ನೀಡುತ್ತಾರೆ. ಸಲಹೆಯನ್ನು ಬಿಡಿ. ಹಸುವಿನ ಸಗಣಿ ತಿಂದು ತೋರಿಸಿದ್ದಾರೆ.

ಹಸುವಿನ ಸಗಣಿಯು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ದೀಕರಿಸುತ್ತದೆ ಎಂದು ಹರಿಯಾಣದ ಕರ್ನಾಲ್ ಮೂಲದ ವೈದ್ಯ ಡಾ. ಮನೋಜ್ ಮಿತ್ತಲ್ ಸಗಣಿ ತಿಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೋಜ್ ಮಿತ್ತಲ್ ಅವರು ಕೊಟ್ಟಿಗೆಯಲ್ಲಿ ನಿಂತು ಸಗಣಿ ಮತ್ತು ಗಂಜಲದ ಪ್ರಯೋಜನದ ಬಗ್ಗೆ ಮಾತನಾಡುತ್ತಾ, ಸಗಣಿಯನ್ನು ತಿಂದಿದ್ದಾರೆ. ನನ್ನ ತಾಯಿ ಸಗಣಿ ತಿನ್ನುವ ಮೂಲಕ ಉಪವಾಸ ಅಂತ್ಯಗೊಳಿಸುತ್ತಿದ್ದರು. ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಸಗಣಿ ತಿನ್ನಬೇಕು. ಅದನ್ನು ತಿಂದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯವೇ ಇಲ್ಲ.  ಹಸುವಿನ ಗಂಜಲದಲ್ಲಿ ಚಿನ್ನದ ಅಂಶವಿದೆ ಎಂದಿದ್ದಾರೆ.

ವರ್ಷಗಳ ಕಾಲ ಗೋಮೂತ್ರವನ್ನು ಕುಡಿಯಿರಿ - ಸಗಣಿ ತಿನ್ನಿರಿ
ಮಾಧ್ಯಮ ವರದಿಗಳ ಪ್ರಕಾರ, ಎಂಬಿಬಿಎಸ್ ವೈದ್ಯ ಮನೋಜ್ ಮಿತ್ತಲ್ ಅವರು ಕಳೆದ ಹಲವಾರು ವರ್ಷಗಳಿಂದ ಗೋಮೂತ್ರವನ್ನು ಕುಡಿಯುತ್ತಿದ್ದಾರೆ ಮತ್ತು ಗೋವಿನ ಸಗಣಿ ತಿನ್ನುತ್ತಿದ್ದಾರೆ ಎಂದು ಹೇಳಿದ್ದಾರೆ. ಹಸುವಿನ ಸಗಣಿ ತಿನ್ನುವುದಕ್ಕೆ ಅವರು ಅನೇಕ ವಾದಗಳನ್ನು ನೀಡಿದರು. ಹಸುವಿನ ಸಗಣಿಯಲ್ಲಿ ವಿಟಮಿನ್ ಬಿ12 ಇದೆ ಎಂದು ಹೇಳಿದರು. ಇದು ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ದಿನನಿತ್ಯದ ಕೆಲಸದಲ್ಲಿ ಬಳಸುವ ಮೊಬೈಲ್, ರೆಫ್ರಿಜರೇಟರ್, ಎಸಿ ಹೀಗೆ ಹಲವು ವಸ್ತುಗಳು ವಿಕಿರಣಕ್ಕೆ ತುತ್ತಾಗುತ್ತವೆ. ವಿಕಿರಣವು ಕ್ಯಾನ್ಸರ್ ಅಪಾಯವನ್ನು ಸಹ ಉಂಟುಮಾಡುತ್ತದೆ. ಹಸುವಿನ ಸಗಣಿ ತಿನ್ನುವುದರಿಂದ ಈ ಅಪಾಯ ಕಡಿಮೆಯಾಗುತ್ತದೆ. ವೈದ್ಯ ಮಿತ್ತಲ್ ವರ್ಷಗಳ ಕಾಲ ನೆಲದ ಮೇಲೆ ಮಲಗುತ್ತಾರೆ. ಫ್ಯಾನ್ ಅಥವಾ ಎಸಿ ಬಳಸಿಲ್ಲ. ಹಸುವಿನ ಸಗಣಿಯಲ್ಲಿ ಶೇಕಡಾ 28 ರಷ್ಟು ಆಮ್ಲಜನಕವಿದ್ದು ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT