ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಸುಲಿಗೆ ಆರೋಪ ಮಾಡಿದ್ದ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಬಂಧನದಿಂದ ರಕ್ಷಣೆ ನೀಡಿದೆ.
ಸಿಂಗ್ ಭಾರತದಲ್ಲಿ ಇದ್ದಾರೆ ಎಂದು ಅವರ ಪರ ವಕೀಲರು ಸುಪ್ರೀಂಕೋರ್ಟ್ ಗೆ ತಿಳಿಸಿದ ನಂತರ ದೇಶದ ಎರಡನೇ ಹಿರಿಯ-ಐಪಿಎಸ್ ಅಧಿಕಾರಿ ಸಿಂಗ್ ಬಂಧನದಿಂದ ರಕ್ಷಣೆ ಪಡೆದರು.
ನಾನು ದೇಶದಲ್ಲಿಯೇ ಇದ್ದೇನೆ ಎಂದು ಸಿಂಗ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಮಹಾರಾಷ್ಟ್ರಕ್ಕೆ ಬರಲು ನನಗೆ ಮುಂಬೈ ಪೊಲೀಸರಿಂದ ಜೀವ ಬೆದರಿಕೆ ಇದೆ ಮತ್ತು ಅದಕ್ಕಾಗಿಯೇ ನಾನು ಅಕ್ಟೋಬರ್ ಮೊದಲ ವಾರದಿಂದ ಕಾಣೆಯಾಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಸಿಂಗ್ ಅವರ ಮನವಿಯ ಮೇರೆಗೆ ಮಹಾರಾಷ್ಟ್ರ ಸರ್ಕಾರ, ಅದರ ಡಿಜಿಪಿ ಸಂಜಯ್ ಪಾಂಡೆ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.