ಕ್ಯಾನ್ಸರ್ 
ದೇಶ

ಕೋವಿಡ್ ಲಾಕ್ ಡೌನ್ ವೇಳೆ ಜಾಗತಿಕವಾಗಿ 7 ರೋಗಿಗಳ ಪೈಕಿ ಓರ್ವರಿಗೆ ತಪ್ಪಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ

ಕೋವಿಡ್-19 ಲಾಕ್ ಡೌನ್ ನಲ್ಲಿ ಹಲವಾರು ರೋಗಿಗಳು ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಲಾಕ್ ಡೌನ್ ಇದ್ದ ಪರಿಣಾಮದಿಂದಾಗಿ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಪ್ರತಿ 7 ಮಂದಿಯ ಪೈಕಿ ಓರ್ವ ರೋಗಿಗೆ ತಪ್ಪಿದೆ.

ಲಂಡನ್: ಕೋವಿಡ್-19 ಲಾಕ್ ಡೌನ್ ನಲ್ಲಿ ಹಲವಾರು ರೋಗಿಗಳು ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಲಾಕ್ ಡೌನ್ ಇದ್ದ ಪರಿಣಾಮದಿಂದಾಗಿ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಪ್ರತಿ 7 ಮಂದಿಯ ಪೈಕಿ ಓರ್ವ ರೋಗಿಗೆ ತಪ್ಪಿದೆ ಎಂದು ಅಧ್ಯಯನ ವರದಿ ತಿಳಿಸಿದೆ. 

ಭಾರತವೂ 65 ದೇಶಗಳಿಂದ ಸಂಗ್ರಹಿಸಲಾಗಿರುವ ಡೇಟಾದ ಮೂಲಕ ಈ ಮಾಹಿತಿ ಬಹಿರಂಗಗೊಂಡಿದೆ. ಲ್ಯಾನ್ಸೆಟ್ ಆನ್ಕಾಲಜಿ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಲಾಕ್ ಡೌನ್ ಯೋಜಿತ, ನಿಗದಿಯಾಗಿದ್ದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಕೋವಿಡ್-19 ಸಂಖ್ಯೆಗಳ ಹೊರತಾಗಿ ಕಡಿಮೆ ಆದಾಯವಿರುವ ದೇಶಗಳ ರೋಗಿಗಳು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಿಕೊಂಡಿದ್ದಾರೆ. 

ಯೂನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್ ನೇತೃತ್ವದ ಸಂಶೋಧಕರ ಅಧ್ಯಯನದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ವಿಳಂಬವಾದ ಪರಿಣಾಮ ಹೆಚ್ಚು ಕ್ಯಾನ್ಸರ್ ನಿಂದ ಉಂಟಾಗುವ ಸಾವಿಗೆ ಕಾರಣವಾಯಿತು ಎಂದು ಹೇಳಿದೆ. 

ಸೂಕ್ತ ಸಮಯದಲ್ಲಿ ಆಪರೇಷನ್ ಮಾಡಿದ್ದರೆ ಸಾವನ್ನು ತಡೆಗಟ್ಟಬಹುದಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ. ಅಧ್ಯಯನದಲ್ಲಿ 15 ಬಹು ಸಾಮಾನ್ಯವಾದ ಸಾಲಿಡ್ ಕ್ಯಾನ್ಸರ್ ವಿಧಗಳನ್ನು 61 ದೇಶಗಳ 466 ಆಸ್ಪತ್ರೆಗಳಲ್ಲಿ 20,000 ಮಂದಿ ರೋಗಿಗಳಲ್ಲಿ ವಿಶ್ಲೇಷಿಸಲಾಗಿದೆ. 

ಭಾರತದಲ್ಲಿ 15 ಕ್ಯಾನ್ಸರ್ ಕೇಂದ್ರಗಳಿಂದ 1,566 ರೋಗಿಗಳ ಡೇಟಾವನ್ನು ಸಂಗ್ರಹಿಸಿದೆ. ಲಾಕ್ ಡೌನ್ ಅವಧಿಯಲ್ಲಿ ರದ್ದುಗೊಂಡ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಸಣ್ಣಪ್ರಮಾಣದಲ್ಲಿ ನಿರ್ಬಂಧವಿದ್ದಾಗ ರದ್ದುಗೊಂಡ ಸಂಖ್ಯೆಗಳಿಗೆ ಹೋಲಿಕೆ ಮಾಡಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ 7 ರೋಗಿಗಳ ಪೈಕಿ ಓರ್ವ ರೋಗಿ (ಶೇ.15 ರಷ್ಟು) 5.3 ಮಂದಿಗೆ ರೋಗ ನಿರ್ಣಯ ಸ್ಪಷ್ಟವಾದ ಬಳಿಕವೂ ಕೋವಿಡ್-19 ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸಂಶೋಧಕರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

SCROLL FOR NEXT