ದೇಶ

ವಿಧಿಯ ಕ್ರೂರತೆ ಪುನೀತ್ ರಾಜ್‌ಕುಮಾರ್ ಎಂಬ ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ: ಪ್ರಧಾನಿ ಮೋದಿ ಸಂತಾಪ 

Sumana Upadhyaya

ನವದೆಹಲಿ: ವಿಧಿ ಇಂದು ಕ್ರೂರತೆ ಮೆರೆದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ಅವರದ್ದು ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂದಿನ ಜನಾಂಗ ಅವರ ನಟನೆ ಮತ್ತು ಅದ್ಭುತ ವ್ಯಕ್ತಿತ್ವ ಮೂಲಕ ನೆನಪು ಮಾಡಿಕೊಳ್ಳಲಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಬರೆದಿದ್ದಾರೆ. 

SCROLL FOR NEXT