ಸಾಂಕೇತಿಕ ಚಿತ್ರ 
ದೇಶ

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು; ಶಾಲೆಗೆ ದೆಹಲಿ ಹೈಕೋರ್ಟ್ ನೊಟೀಸ್

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ. 

ನವದೆಹಲಿ: ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ. 

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ 70,000 ರೂಪಾಯಿ ನೀಡುವುದಕ್ಕೆ ಮುಖ್ಯೋಪಾಧ್ಯಯರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಶಾಲೆ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿತ್ತು. 

ಆರ್ ಎಸ್ ಎಸ್ ನ ಟ್ರಸ್ಟ್ ಆಗಿರುವ ಸಮರ್ಥ ಶಿಕ್ಷಾ ಸಮಿತಿ ಹಾಗೂ ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದಿಂದ ಈ  ಶಾಲೆಯನ್ನು ನಡೆಸಲಾಗುತ್ತಿತ್ತು. ಈ ಟ್ರಸ್ಟ್ ನಿಂದ ನಡೆಸಲಾಗುತ್ತಿರುವ ಶಾಲೆಗಳಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 70,000- 1,00,000 ರೂಪಾಯಿ ದೇಣಿಗೆ ಸಂಗ್ರಹಿಸುವುದಕ್ಕೆ ಟಾರ್ಗೆಟ್ ನೀಡಲಾಗಿತ್ತು.

ಇದಿಷ್ಟೇ ಅಲ್ಲದೇ ದೇಣಿಗೆ ಸಂಗ್ರಹಕ್ಕಾಗಿ ಸಿಬ್ಬಂದಿಗಳಿಗೂ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳು, ಪೋಷಕರಿಂದ ದೇಣಿಗೆ ಸಂಗ್ರಹ, ಮಾರ್ಕೆಟ್ ಗಳಿಗೆ ತೆರಳಿ ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುವಂತೆ ಶಾಲೆಯ ಆಡಳಿತ ಮಂಡಳಿ ಸೂಚನೆ ನೀಡಿತ್ತು.  ಇದರ ಹೊರತಾಗಿ ಶಾಲೆಯ ಶಿಕ್ಷಕರಿಂದ ತಲಾ 15,000 ರೂಪಾಯಿ ದೇಣಿಗೆಯನ್ನು ಮಂದಿರ ನಿರ್ಮಾಣದ ಸಮರ್ಪಣ ನಿಧಿ ಫಂಡ್ ಗೆ ಸಂಗ್ರಹಿಸಲು ಶಾಲೆಯ ಆಡಳಿತ ಮಂಡಳಿ ಮುಂದಾಗಿತ್ತು. 

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ರಿಟ್ ಅರ್ಜಿಯನ್ನು ದಾಖಲಿಸಿ ಘಟನೆಯನ್ನು ವಿವರಿಸಿದ್ದರು. ತಮ್ಮ ಪತಿ 2016 ರಲ್ಲಿ ಅಪಘಾತಕ್ಕೆ ಒಳಗಾದಾಗಿನಿಂದಲೂ ತಾವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು, ಆದರೂ ಮಂದಿರ ನಿರ್ಮಾಣಕ್ಕಾಗಿ 2,100 ರೂಪಾಯಿಗಳನ್ನು ನೀಡಿದ್ದರು, ಆದರೆ 15,000 ರೂಪಾಯಿ ನೀಡುವುದಕ್ಕೆ ಸಾಧ್ಯವಾಗಿಲ್ಲದ ಕಾರಣ ನಿರಾಕರಿಸಿದ್ದರು. ನಿಗದಿತ ಹಣವನ್ನು ನೀಡದೇ ಇದ್ದ ದಿನದಿಂದಲೂ ಶಾಲೆಯಲ್ಲಿ ಸಮರ್ಥ ಶಿಕ್ಷಾ ಸಮಿತಿ ಪ್ರತೀಕಾರದ ನಡೆಯನ್ನು ಅನುಸರಿಸುತ್ತಿತ್ತು. ಮುಖ್ಯೋಪಾಧ್ಯಾಯರಿಗೆ ಕಿರುಕುಳ ನೀಡಲು ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿತ್ತು, ಈ ರೀತಿ ಮಾಡುವುದರಿಂದ ಆಕೆಯೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು ಅಥವಾ ಅವರನ್ನು ತೆಗೆದುಹಾಕುವಂತಾಗಬೇಕು" ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಆರ್ಥಿಕ ಮುಗ್ಗಟ್ಟು, ಮಾನಸಿಕ ಕಿರಿಕಿರಿಯನ್ನು ತಾಳಲಾರದೇ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ದೆಹಲಿ ಸಿಎಂಗೂ ಪತ್ರ ಬರೆದಿದ್ದರು. ಈ ಬಳಿಕ ಶಾಲೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಬೆಳವಣಿಗೆಗಳ ಬಳಿಕ ಶಾಲೆಯ ಆಡಳಿತ ಮಂಡಳಿ ಆಕೆಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! Video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT