ಟೀ ಶಾಪ್ ಬ್ಯಾನರ್ ಮುಂದೆ ಉನ್ನಿ 
ದೇಶ

ಟೀ ಶಾಪ್ ಮುಂದೆ ಹುಡುಗಿ ಬೇಕಾಗಿದ್ದಾಳೆ ಎಂದು ಬ್ಯಾನರ್ ಹಾಕಿದ ವರ: ದೇಶ ವಿದೇಶಗಳಿಂದ ಹುಡುಗಿಯರ ಕರೆ

ವಧು ಅನ್ವೇಷಣೆಗಾಗಿ ಬ್ರೋಕರ್ ಮೊರೆ ಹೋಗುವುದನ್ನು ನೋಡಿರುತ್ತೀರಿ, ಮ್ಯಾಟ್ರಿಮೋನಿಯಲ್ ವೆಬ್ ಸೈಟುಗಳಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ನೋಡಿರುತ್ತೀರಿ. ಇಲ್ಲೊಬ್ಬ ಭೂಪ ಹುಡುಗಿ ಬೇಕಾಗಿದ್ದಾಳೆ ಎಂದು ತನ್ನ ಅಂಗಡಿ ಮುಂದೆ ಬ್ಯಾನರ್ ಹಾಕಿಕೊಂಡಿದ್ದಾನೆ. ಅವನ ಅದೃಷ್ಟಕ್ಕೆ ವಿದೇಶಗಳಿಂದ ಕರೆ ಬರುತ್ತಿದೆ. 

ತ್ರಿಶ್ಯೂರ್: ಕೇರಳದ ವಲ್ಲಚಿರ ಪಟ್ಟಣದ ನಿವಾಸಿ ಉನ್ನಿಕೃಷ್ಣನ್ ಟೀ ಶಾಪ್ ನಡೆಸುತ್ತಿದ್ದಾನೆ. 33 ವರ್ಷದ ಆತ ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುತ್ತಿದ್ದಾನೆ. ಅದಕ್ಕಾಗಿ ಆತ ಹಿಡಿದ ಮಾರ್ಗ ಮಾತ್ರ ವಿನೂತನವಾದುದು. 

ಬ್ರೋಕರ್, ಮ್ಯಾಟ್ರಿಮೋನಿಯಲ್ ಜಾಲತಾಣಗಳ ಗೊಡವೆಯೇ ಬೇಡವೆಂದು ಆತ ತನ್ನ ಅಂಗಡಿ ಮುಂದೆಯೇ ಹುಡುಗಿ ಬೇಕಾಗಿದ್ದಾಳೆ ಎಂದು ಪುಟ್ಟ ಬ್ಯಾನರ್ ಹಾಕಿಕೊಂಡಿದ್ದಾನೆ. ಯಾವ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂದು ಬೇರೆ ಉದಾರತೆ ಮೆರೆದಿದ್ದಾನೆ.

ಉನ್ನಿಕೃಷ್ಣನ್ ನ ಜಾಹೀರಾತು ಇದೀಗ ವೈರಲ್ ಆಗಿದ್ದು, ವಿದೇಶಗಳಿಂದ ಕರೆ ಬರುತ್ತಿವೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನಿಂದ ಹುಡುಗಿಯರು ಕರೆ ಮಾಡಿದ್ದಾರೆ ಎಂದು ನಾಚುತ್ತಾ ಉನ್ನಿಕೃಷ್ಣನ್ ಹೇಳುತ್ತಾರೆ. 

ಆತ ಇತ್ತೀಚಿಗಷ್ಟೆ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಲಾಟರಿ ಅಂಗಡಿ ನಡೆಸುತ್ತಿದ್ದ ಆತ ಈಗ ಟೀ ಅಂಗಡಿ ಇಟ್ಟುಕೊಂಡಿದ್ದು, ಬಿಜಿನೆಸ್ ಚೆನ್ನಾಗಿ ಆಗುತ್ತಿದೆ ಎನ್ನುತ್ತಾರೆ. ಸದ್ಯ ಆತನ ಬದುಕಿಗೆ ಬೇಕಾಗಿರುವುದು ಒಳ್ಳೆ ಹೆಂಡತಿ. 

ಉನ್ನಿಕೃಷ್ಣನ್ ಮನೆಯವರು ಈ ಹಿಂದೆ ಬ್ರೋಕರ್ ಮೊರೆ ಹೋಗಿ ಜಾತಕ ನೋಡಿಸಿ ಹುಡುಗಿ ಹುಡುಕುವ ಪ್ರಯತ್ನ ನಡೆಸಿದ್ದರಂತೆ ಆದರೆ ಯಾವುದೇ ಹುಡುಗಿಯ ಜಾತಕ ಹೊಂದಲಿಲ್ಲವಂತೆ. ಹೀಗಾಗಿ ಆ ಮಾರ್ಗವನ್ನೇ ತ್ಯಜಿಸಿ ಜಾತಕದ ಉಸಾಬರಿಯೇ ಬೇಡವೆಂದು ಬ್ಯಾನರ್ ತಗುಲಿ ಹಾಕಿದ್ದರು. 

ಸ್ನೇಹಿತರೊಬ್ಬರು ಉನ್ನಿಯ ಬ್ಯಾನರ್ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ದೂರದೂರಿನ ಮಲಯಾಳಿಗಳು ಮದುವೆ ವಿಚಾರವಾಗಿ ಕರೆ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT