ಮಾಜಿ ಪ್ರಧಾನಿ ದಿ.ಪಂಡಿತ್ ಜವಹರಲಾಲ್ ನೆಹರೂ 
ದೇಶ

ಗಾಂಧೀಜಿ ಎಂದಿಗೂ ಟೊಪ್ಪಿ ಧರಿಸುತ್ತಲೇ ಇರಲಿಲ್ಲ, ಅವರ ಹೆಸರಲ್ಲಿ ನೆಹರೂ ಧರಿಸುತ್ತಿದ್ದರು: ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ, ಅವರ ಹೆಸರಿನಲ್ಲಿ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಧರಿಸಿ ಅದನ್ನು ಮಹಾತ್ಮಾ ಗಾಂಧಿ ಟೋಪಿ ಎಂದು ಕರೆದರು ಎಂದು ಗುಜರಾತ್ ನ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ನೀಡಿದ್ದ ಹೇಳಿಕೆಯನ್ನು ಅಲ್ಲಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಸಮರ್ಥಿಸಿಕೊಂಡಿದ್ದಾರೆ.

ಅಹ್ಮದಾಬಾದ್: ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ, ಅವರ ಹೆಸರಿನಲ್ಲಿ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಧರಿಸಿ ಅದನ್ನು ಮಹಾತ್ಮಾ ಗಾಂಧಿ ಟೋಪಿ ಎಂದು ಕರೆದರು ಎಂದು ಗುಜರಾತ್ ನ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ನೀಡಿದ್ದ ಹೇಳಿಕೆಯನ್ನು ಅಲ್ಲಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಸಮರ್ಥಿಸಿಕೊಂಡಿದ್ದಾರೆ.

ಗಾಂಧಿ ಟೋಪಿ ಎಂದು ಹೆಸರಾಗಿದ್ದರೂ ಯಾರೂ ಕೂಡ ಗಾಂಧಿಯವರು ಟೊಪ್ಪಿ ಧರಿಸಿದ್ದನ್ನು ನೋಡಿದ್ದಿಲ್ಲ ಎಂದು ಹೇಳಿದ್ದಾರೆ.
ಗಾಂಧೀಜಿಯವರು ಆ ಗಾಂಧಿ ಟೊಪ್ಪಿ ಧರಿಸಿರುವುದನ್ನು ಕಾಣುವ ಫೋಟೋವನ್ನು ಇದುವರೆಗೆ ಯಾರೂ ಕಂಡಿಲ್ಲ. ನಾನು ಕೂಡ ಅಂತಹ ಫೋಟೋವನ್ನು ನೋಡಿಲ್ಲ. ಹೀಗಾಗಿ, ರತ್ನಾಕರ್ ಅವರು ಹೇಳಿದ್ದು ನಿಜ. ಟೊಪ್ಪಿಯನ್ನು 'ಗಾಂಧಿ ಟೋಪಿ' ಎಂದು ಕರೆಯಲಾಗಿದ್ದರೂ, ಗಾಂಧೀಜಿ ಗಾಂಧಿ ಟೋಪಿ ಧರಿಸಿರುವುದನ್ನು ಬಹುಶಃ ಯಾರೂ ನೋಡಿಲ್ಲ ಎಂದು ನಿನ್ನೆ ಗುಜರಾತ್ ನ ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇತ್ತೀಚೆಗೆ ಗುಜರಾತ್ ಬಿಜೆಪಿಯ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ರತ್ನಾಕರ್ ಅವರು ಮೊನ್ನೆ ಭಾನುವಾರ ಟ್ವೀಟ್ ಮಾಡಿ, ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಧರಿಸಿದಾಗ "ಗಾಂಧಿ ಟೋಪಿ" ಎಂದು ಕರೆದರು ಎಂದು ಬರೆದುಕೊಂಡಿದ್ದರು.

ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ಬ್ರಿಟಿಷರ ಪರವಾಗಿ ನಿಂತ ಜನರು ಈಗ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಮೊದಲ ಪ್ರಧಾನಿಯತ್ತ ಬೆರಳು ತೋರಿಸುತ್ತಿದ್ದಾರೆ. ಬ್ರಿಟಿಷ್ ಟೋಪಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಜನರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಾಂಧಿ-ಸರ್ದಾರ್‌ ಗುಜರಾತ್‌ಗೆ ಬಂದ ನಂತರ ಭಾರತದ ಮೊದಲ ಪ್ರಧಾನ ಮಂತ್ರಿಗಳ ಬಗ್ಗೆ ಇಂತಹ ಟೀಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದೆ.

ಕೆಲವರು ಹತಾಶರಾಗಿ ಇತಿಹಾಸವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನಿಶಾ ದೋಷಿ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT